ನಮ್ಮ ಕರುನಾಡಿನ ಸಾಂಪ್ರದಾಯಿಕ ಬೆಳೆ (RAGI) ರಾಗಿ,ರಾಗಿ ತಿನ್ನುವವನಿಗೆ ರೋಗವಿಲ್ಲ, ರಾಗಿ ತಿಂದವ ನಿರೋಗಿ’ ಎಂಬ ಮಾತುಗಳನ್ನು ನಮ್ಮ ಗ್ರಾಮೀಣ ಜನತೆಯ ಬಾಯಲ್ಲಿ ಕೇಳುತ್ತೇವೆ,

ಈ ಮಾತುಗಳು ಸತ್ಯ ಎಂಬುದನ್ನು ರಾಗಿಯು ಸಾಬೀತು ಪಡಿಸಿದೆ. ‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ಎನ್ನುತ್ತಾರೆ ನಮ್ಮ ಪೂರ್ವಿಕರು, ಅಂದರೆ ರಾಗಿ ಮುದ್ದೆ ಉಂಡವ ಬೆಟ್ಟ ಕಿತ್ತಿಡುವಷ್ಟು ಬಲಶಾಲಿಯಾಗಿರುತ್ತಾನೆ.
ರಾಗಿ (RAGI) ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ, ರಾಗಿ ಒಂದು ಅತ್ಯತ್ತಮ ಆಹಾರದ ಬೆಳೆಯಾಗಿದೆ, ಮಕ್ಕಳು ಹಾಗೂ ದೊಡ್ಡವರೆನ್ನದೆ ರಾಗಿಯನ್ನು ಉಪಯೋಗಿಸಬಹುದು.
ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಕರ್ನಾಟಕ ಬಿಟ್ಟರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ರಾಗಿ ಪ್ರಮುಖ ಬೆಳೆಯಾಗಿದೆ.
ರಾಗಿ ಮುದ್ದೆಯ ಜನಪ್ರಿಯತೆ ಎಷ್ಟಿದೆ ಅಂದ್ರೆ ಸಿಎಫ್ಟಿ ಆರ್ಐ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನೇ ವಿನ್ಯಾಸಗೊಳಿಸಿದೆ.
ರಾಗಿಯಿಂದ ತಯಾರಿಸುವ ಪ್ರತಿಯೊಂದು ಅಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೇರೆ ಧಾನ್ಯಗಳಿಗಿಲ್ಲ, ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು. ರಾಗಿ ಗಂಜಿಗೆ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ ಬಳಲಿಕೆ ಮಾಯವಾಗಿ ಶರೀರವು ಹಾಯೆನಿಸುವುದು.
ಪೋಷಕಾಂಶಗಳ ವಿವರ :
100 ಗ್ರಾಂ ರಾಗಿಯಲ್ಲಿನ ಪೋಷಕಾಂಶಗಳ ವಿವರ ಕೆಳಕಂಡಂತಿದೆ:
- ಪ್ರೋಟಿನ್ – 7.3 ಗ್ರಾಂ
- ಕೊಬ್ಬು -1.3 ಗ್ರಾಂ
- ಪಿಷ್ಟ – 72 ಗ್ರಾಂ
- ಖನಿಜಾಂಶ -2.7 ಗ್ರಾಂ
- ಸುಣ್ಣದಂಶ -3.44 ಗಾಂ
- ನಾರಿನಂಶ —3.6ಗ್ರಾಂ
ರಾಗಿಯ (RAGI) ಉಪಯೋಗಗಳು:
- ದೇಹದ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ
- ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ.
- ಮಧುಮೇಹದ ಅಸ್ಪಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.
- ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
- ಮಲಬದ್ಧತೆಗೆ ಉಪಯೋಗಕಾರಿ
- ಥೈರಾಯ್ಡ್ ಸಮಸ್ಯೆಗಳಿಂದ ಪರಿಹಾರ.
- ತಾಯಂದಿರಿಗೆ ಹಿಮೋಗ್ಲೋಬೀನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.
- ರಾಗಿ ತಂಪು ಗುಣ ಹೊಂದಿರುವ ಸ್ವಾತಿಕ ಆಹಾರ.
ರಾಗಿ ಕಾಳುಗಳು
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದವರಾದ ಶ್ರೀನಿವಾಸ ಅವರು ರಾಗಿಯ ಕಾಳುಗಳನ್ನು ವಿಭಿನ್ನ ರೀತಿಯಲ್ಲಿ ಬಳಸಿದ್ದಾರೆ,
1 kg ರಾಗಿಯಲ್ಲಿ 3,42,249 ರಾಗಿ ಕಾಳುಗಳು ಇರುತ್ತವೆ ಎಂದು,ಅತಿ ಕ್ಲಿಷ್ಟಕರವಾದ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದಾರೆ.
ಶ್ರೀನಿವಾಸ್ ಅವರ ಸಾಧನೆಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ (Karnataka book of record) ಲಭಿಸಿದೆ.
ಆಹಾರದಲ್ಲಿ ರಾಗಿಯ ಬಳಕೆ:ರಾಗಿಹಿಟ್ಟಿನಿಂದ
- ರೊಟ್ಟಿ
- ಮುದ್ದೆ
- ದೋಸೆ
- ಗಂಜಿ
- ಹಾಲ್ ಬಾಯಿ(ಸಿಹಿ)
ಮಕ್ಕಳ ಪೌಷ್ಠಿಕ ಆಹಾರ –
ಒಡ್ಡರಾಗಿ ಹಿಟ್ಟು ಅಥವಾ ರಾಗಿ ಮಣ್ಣೆ
ಇದು ಅತ್ಯಂತ ಮಿಟಮಿನ್ ಯುಕ್ತ ಅಹಾರ. ಜೀರ್ಣಸಿಕೊಳ್ಳುಲು ಸುಲಭ ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ -ಮುಟ್ಟಾಗಿಯೂ ಇರುತ್ತಾರೆ.
ಹುರಿ ಹಿಟ್ಟು
- 1 kg ರಾಗಿಗೆ
- 1/2 ಲೋಟ ನೀರಿಗೆ
- 1/2 ಚಮಚ ಉಪ್ಪು
ಹಾಕಿ ಮಿಕ್ಸ್ ಮಾಡಿ,ಒಂದು ಬಿಳಿ ಬಟ್ಟೆಯ ಮೇಲೆ ಹಾಕಿ ,
ನಂತರ stove ಮೇಲೆ ದಪ್ಪ ತಳದ ಬಾಣಲೆ ಇಟ್ಟು , ರಾಗಿಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಹುರಿದರೆ ಅರಳು ಬರುತ್ತದೆ,
ಅದನ್ನು ನುಣ್ಣಗೆ ಬೀಸಿ ಪುಡಿ ಮಾಡಿಸಿದರೆ ಹುರಿಹಿಟ್ಟು ರೆಡಿ.
ಹುರಿಹಿಟ್ಟಿಗೆ ಸರಿಯಾದ ಪ್ರಮಾಣದಲ್ಲಿ ಹಾಲು, ಬೆಲ್ಲದ ಪುಡಿ, ಕಾಯಿತುರಿ, ಯಾಲಕ್ಕಿ ಪುಡಿ ಸೇರಿಸಿ ಸೇವಿಸಿದರೆ,ಬಹಳ ಚೆನ್ನಾಗಿರುತ್ತದೆ.
“ರಾಗಿ ತಂದೀರ”
ಪುರಂದರದಾಸರು ಸಹ ರಾಗಿಯ ಮಹತ್ವವನ್ನು ತಮ್ಮ ಕೃತಿಗಳ ಮೂಲಕ ಸಾರಿದ್ದಾರೆ.
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ರಾಗಿ ತಂದೀರಾ.
ಡೆಲ್ಲಿಯಲ್ಲಿ ರಾಗಿ ಮುದ್ದೆ ಫೇಮಸ್ ಮಾಡಿದ ದೊಡ್ಡಗೌಡ್ರು !
ರಾಗಿ ಮುದ್ದೆಯಿಂದಲೇ ಆರೋಗ್ಯ ಭಾಗ್ಯ ಕಾಪಾಡಿಕೊಂಡು ಬಂದ, ರಾಗಿ ಮುದ್ದೆ ಪ್ರಿಯರಾದ ಮಾಜಿ ಪ್ರಧಾನ ಮಂತ್ರಿ ದೇವೇಗೌಡ್ರು ಮುದ್ದೆ ( Ragi Ball) ಡೆಲ್ಲಿಗೆ ಪರಿಚಯಿಸಿದರು.
1996 ರಲ್ಲಿ 10 ತಿಂಗಳು ಕಾಲ ಪ್ರಧಾನಿಯಾಗಿದ್ದ ದೇವೇಗೌಡ್ರು ಡೆಲ್ಲಿಯ ತಮ್ಮ ನಿವಾಸದಲ್ಲಿ ನಿತ್ಯವೂ ಊಟಕ್ಕೆ ರಾಗಿ ಮುದ್ದೆ ಮಾಡುವ ಅಡುಗೆ ಭಟ್ಟನನ್ನೇ ಕರೆದುಕೊಂಡು ಹೋಗಿದ್ದು ಇತಿಹಾಸವಾಗಿದೆ.
ಆಗಿನಿಂದಲೂ ದೆಹಲಿಯ ಕರ್ನಾಟಕ ಭವನದಲ್ಲಿ ರಾಗಿ ಮುದ್ದೆ ಹಾಗೂ ಸೊಪ್ಪು ಸಾರು ಊಟ ಮಾಮೂಲಿಯಾಗಿದೆ.
- ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಸಾಧ್ಯವಾಗಲಿಲ್ಲ : ಸಂಪುಟ ರಚನೆ ಬಗ್ಗೆ ಮಾತುಕತೆ ಇಲ್ಲ : ಸಿಎಂ
- ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
- ಕಾಂಗ್ರೆಸ್ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ
- ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
- ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
- ರಾಜ್ಯದ ಹವಾಮಾನ ವರದಿ (Weather Report) 21-05-2022
More Stories
SSLC ನಂತರ ವಿದ್ಯೆ, ಉದ್ಯೋಗದ ಬೆಳಕು!
ಯುವಕರ ಬಾಳಿಗೆ ಉದ್ಯೋಗದ ಆಶಾಕಿರಣ; ‘ಅನಂತ ಸೇನಾ ಪೂರ್ವ ತರಬೇತಿ ಅಕಾಡೆಮಿ’
ನರಸಿಂಹ ಅವತಾರ(NARASIMHA AVATHARA)