ಹಾಸನ – ಐಫೋನ್‌ ಆಸೆಗಾಗಿ ಕೊರಿಯರ್‌ ಬಾಯ್‌ ಹತ್ಯೆ

Team Newsnap
1 Min Read

ಐಫೋನ್‌ ( iphone ) ಆಸೆಗಾಗಿ ಕೊರಿಯರ್‌ ಬಾಯ್‌ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ನಗರದಲ್ಲಿ ನಡೆದಿದೆ.

ಕೊಲೆ ( murder )ಮಾಡಿ ನಾಲ್ಕು ದಿನ ಶವದ ಜತೆ ಮನೆಯಲ್ಲೇ ಇದ್ದರು. ಕೊಲೆ ಪ್ರಕರಣವನ್ನು ಅರಸಿಕೆರೆ ಪೊಲೀಸರು ಭೇಧಿಸಿದ್ದಾರೆ.ರಾಜ್ಯದಲ್ಲಿ IAS – IPS ಯುದ್ದ : ರೋಹಿಣಿ ವಿರುದ್ದ ಮತ್ತೆ ಸಿಡಿದೆದ್ದ ರೂಪ

ಫೆ.7 ರಂದು ಕೊರಿಯರ್‌ ಬಾಯ್‌ ಅನ್ನು ಕೊಲೆ ಮಾಡಲಾಗಿತ್ತು. ಹೇಮಂತ್‌ (23) ಕೊಲೆಯಾದ ಯುವಕ. 20 ವರ್ಷದ ಆರೋಪಿ ಹೇಮಂತ್‌ ದತ್ತ ಎಂಬಾತ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಈ ಸಂಬಂಧ ಅರಸಿಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಆರೋಪಿ ತನಿಖೆಯಿಂದ ಮತ್ತಷ್ಟು ವಿಚಾರ ಹೊರಗೆ ಬರಲಿದೆ.

Share This Article
Leave a comment