ಗನ್ ತೋರಿಸಿ ಕೊಲೆ ಬೆದರಿಕೆ- ಜೆಡಿಎಸ್ ಎಂಎಲ್‍ಸಿ ರಮೇಶ್ ಗೌಡ ವಿರುದ್ಧ ದೂರು

Team Newsnap
1 Min Read

ಆಸ್ತಿ ವಿಚಾರಕ್ಕೆ ಜೆಡಿಎಸ್ ಎಂಎಲ್‍ಸಿ ರಮೇಶ್ ಗೌಡ ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂ ಗಂಭೀರ ಆರೋಪದ ದೂರು ದಾಖಲಾಗಿದೆ.

ಆಸ್ತಿ ವಿಚಾರವಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸುನೀಲ್ ಹಾಗೂ ಕೀರ್ತಿ ಎಂಬವರು ದೂರು ದಾಖಲಿಸಿದ್ದಾರೆ.

ಹಣೆಗೆ ಗನ್ ಇಟ್ಟು ಕೊಲ್ತೀನಿ ಎಂದು ರಮೇಶ್ ಧಮ್ಕಿ ಹಾಕಿದ್ದಾರೆ. ಅಲ್ಲದೆ ಜಯಂತ್ ಹೆಸರಿನ ಪೊಲೀಸ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ

ಜಯಂತ್ ಹೆಸರಲ್ಲಿ ದೂರುದಾರರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪವನ್ನು ರಮೇಶ್ ಗೌಡ ಎದುರಿಸುತ್ತಿದ್ದಾರೆ.

ಈ ಸಂಬಂಧ ದೂರುದಾರರು ಹೆಣ್ಣೂರು ಠಾಣೆಯಲ್ಲಿ ದೂರು ನೀಡಿದ್ದಾರೆ

ಎಫ್‍ಐಆರ್ ದಾಖಲಿಸಲು ಪಟ್ಟು ಹಿಡಿದಿದ್ದಾರೆ. ಪ್ರಕರಣವನ್ನು ಡಿಸಿಪಿ ಸುಜೀತಾ ಸಲ್ಮಾ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a comment