ಹಿರಿಯ ನಟ ಶರಪಂಜರ ಶಿವರಾಂ ಪಂಚಭೂತಗಳಲ್ಲಿ ಲೀನ

Team Newsnap
0 Min Read

ಶನಿವಾರ ಮಧ್ಯಾಹ್ನ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ ಶರಪಂಜರ ಶಿವರಾಂ ಅಂತ್ಯಕ್ರಿಯೆ ಭಾನುವಾರ ಬನಶಂಕರಿ ಚಿತಾಗಾರದಲ್ಲಿ ನೆರವೇರಿತು.

ನಟ ಶಿವರಾಂ ಪಾರ್ಥೀವ ಶರೀರವನ್ನು ಇಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಿಂದ ತ್ಯಾಗರಾಜ ನಗರದಲ್ಲಿನ ಶಿವರಾಂ ಮನೆಗೆ ತರಲಾಗಿತ್ತು .

ಇಲ್ಲಿ ಕುಟುಂಬಸ್ಥರು ಬ್ರಾಹ್ಮಣದ ಯಜುರ್ವೇದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳ ಕಾರ್ಯಗಳನ್ನು ನೆರವೇರಿಸಿದರು.

ನಂತರ ಬನಶಂಕರಿ ಚಿತಾಗಾರದಲ್ಲಿ ಪೊಲೀಸರ ಸಕಾ೯ರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ಮಾಡಲಾಯಿತು.
ಅಂತ್ಯಕ್ರಿಯೆಯಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರು ಮತ್ತು ರಾಜಕಾರಣಿಗಳು ಸೇರಿದಂತೆ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

Share This Article
Leave a comment