ಟೋಕಿಯೋ ಪ್ಯಾರಾಲಿಂಪಿಕ್ಸ್ನ ಕೊನೆಯ ದಿನವಾದ ಇಂದು ಭಾರತದ ಪದಕ ಬೇಟೆ ನಾಗಾಲೋಟದಲ್ಲಿ ಸಾಗಿದೆ.
ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ಎಲ್4 ವಿಭಾಗದಲ್ಲಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಚಿನ್ನ ಒಲಿದಿದೆ.
ಬ್ಯಾಡ್ಮಿಂಟನ್ ಮೆನ್ಸ್ ಸಿಂಗಲ್ಸ್ ಎಸ್ಹೆಚ್6 ವಿಭಾಗದ ಫೈನಲ್ ಪಂದ್ಯದಲ್ಲಿ ಹ್ಯಾಕಾಂಗ್ನ ಚೂ ಮನ್ ಕೈ ವಿರುದ್ಧ ಸೆಣಸಾಡಿದ ಕೃಷ್ಣ ನಗರ್, ಮೊದಲ ಸೆಟ್ನಲ್ಲಿ 21-17 ಅಂತರದಿಂದ ಮೇಲುಗೈ ಸಾಧಿಸಿದರು.
ಒಂದು ಅಂಕ ಪಡೆದು ಮುನ್ನಡೆ ಸಾಧಿಸಿದ ಕೃಷ್ಣ ನಗರ್, ಸೆಕೆಂಡ್ ರೌಂಡ್ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಬೇಕಾಯ್ತು.
ಆಕ್ರಮಣಕಾರಿ ಆಟ ಪ್ರದರ್ಶಿಸಿದ ಹ್ಯಾಕಾಂಗ್ನ ಚೂ ಮನ್ ಕೈ 21-16ರ ಅಂತರದಿಂದ ಗೆದ್ದು ಸಮಬಲ ಸಾಧಿಸಿದರು.
ಕೊನೆಯ ಸೆಟ್ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೃಷ್ಣ , 21-17 ಅಂತರದಿಂದ ಗೆದ್ದು ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.