ಜಿ ಕೆ ನರಸಿಂಹಮೂರ್ತಿ ಇನ್ನಿಲ್ಲ

Team Newsnap
0 Min Read

ಮಂಡ್ಯದ ಗುತ್ತಲು ಕೃಷ್ಣಪ್ಪ ನರಸಿಂಹಮೂರ್ತಿ ( 93) ಶುಕ್ರವಾರ ನಿಧನರಾದರು.

ಇಬ್ಬರು ಗಂಡು ಮಕ್ಕಳು , ಸೊಸೆಯಂದಿರು. ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲಿದ್ದ ನರಸಿಂಹಮೂರ್ತಿಗಳು ತುಂಬು ಜೀವನ ನಡೆಸಿದರು.

ಮಂಡ್ಯ ಜಿಲ್ಲಾ ಬ್ರಾಹ್ಮಣರ ಮಾಹಾ ಸಭಾ, ಶಂಕರ ಮಠ, ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್, ಮಂಡ್ಯ ಜಿಲ್ಲಾ ವಾಣಿಜ್ಯ ಮಂಡಳಿಯೂ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಿ ಅವುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದರು.

ಮಂಡ್ಯದ ಅನೇಕ ಗಣ್ಯರು ನರಸಿಂಹಮೂರ್ತಿ ಅವರ ನಿಧನಕ್ಕೆ ಕಂಬನಿ ಮಿಡಿದ್ದಾರೆ.

Share This Article
Leave a comment