ರಾಮನಗರದ ಕಾಂಗ್ರೆಸ್ ಕಾರ್ಯಕರ್ತನ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಹಣ ಮತ್ತು ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಆನೇಕಲ್ ರಸ್ತೆಯ ಕಾಡುಜಕ್ಕಸಂದ್ರದಲ್ಲಿ ನಡೆದಿದೆ.
ನಾಗರಾಜು (43) ಎಂಬುವವರೇ ತೀವ್ರವಾಗಿ ಗಾಯಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತ. ತೀವ್ರವಾಗಿ ಗಾಯಗೊಂಡ ನಾಗರಾಜು ಕನಕಪುರ ತಾಲೂಕಿನ ಶೆಟ್ಟಿಕೆರೆದೊಡ್ಡಿ ಗ್ರಾಮದ ನಿವಾಸಿ.ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಗೆ ಯುವತಿಯಿಂದ ಹನಿಟ್ರ್ಯಾಪ್ ಯತ್ನ
1 ಲಕ್ಷದ 99 ಸಾವಿರ ರೂಪಾಯಿ ಹಣ ಹಾಗೂ 10 ಗ್ರಾಂ ಚಿನ್ನದ ಉಂಗುರವನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಆನೇಕಲ್ ರಸ್ತೆಯ ಕಾಡುಜಕ್ಕಸಂದ್ರದ ಪಕ್ಕದಲ್ಲಿ ಆರೋಪಿಗಳ ಪೈಕಿ ಒಬ್ಬನಾದ ಶ್ರೀನಿವಾಸ್ ಎಂಬಾತನಿಗೆ ಸೇರಿದ ತೋಟದ ಮನೆಯಲ್ಲಿ ಈ ಕೃತ್ಯ ನಡೆದಿದೆ. ನಾಗರಾಜು ಅವರ ಕೈಕಾಲು ಕಟ್ಟಿ ಹಾಕಿ, ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
- ‘ವೈಸ್ ಅಡ್ಮಿರಲ್’ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ನೇಮಕ
- ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
- ಕುಮಾರಸ್ವಾಮಿ ಗೆಲ್ಲಿಸಿ, ಕೇಂದ್ರ ಮಂತ್ರಿ ಸ್ಥಾನ ಸಾಧ್ಯತೆ : ಬಿಜೆಪಿ ಶಾಸಕ ಸುರೇಶ್ ಕುಮಾರ್
- ಮಂಡ್ಯದಲ್ಲಿ ಐಸ್ಕ್ರೀಂ ತಿಂದು ಅವಳಿ ಮಕ್ಕಳು ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ದೇವೇಗೌಡರಿಂದ ಡಿ ಸಿ ಎಂ ಡಿಕೆಶಿ ವಿರುದ್ಧ ಗಂಭೀರ ಆರೋಪ