ಮಾಜಿ ಸಿಎಂ ಇಸ್ಪೀಟ್​​ ಆಡೋ ಫೋಟೋಸ್​​ ಇದೆ, ಬಿಡುಗಡೆ ಮಾಡುವೆ : ಸಚಿವ ಯೋಗೇಶ್ವರ್

Team Newsnap
1 Min Read

ಮಾಜಿ ಮುಖ್ಯಮಂತ್ರಿ ಹೆಚ್​​.ಡಿ ಕುಮಾರಸ್ವಾಮಿ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ನಡುವಿನ ವಾಕ್​ ಯುದ್ಧ ಉಲ್ಬಣಗೊಂಡಿದೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯೋಗೇಶ್ವರ್,
ಇಸ್ಪೀಟು ದುಡ್ಡಿನಲ್ಲಿ ಸಚಿವನಾಗಿದ್ದಾನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಈ ಕುಮಾರಸ್ವಾಮಿ ಒಂದು ತರಹ ಜೋಕರ್ ಥರ. ಯಾವ ಪಾರ್ಟಿಗಾದರೂ ಅಡ್ಜೆಸ್ಟ್ ಆಗುತ್ತಾರೆ. ವಿಧಾನ ಪರಿಷತ್​​​ನಲ್ಲಿ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಸವರಾಜ್ ಹೊರಟ್ಟಿ ಅವರನ್ನು ಸ್ಪೀಕರ್ ಮಾಡಿದರು. ಮೈಸೂರಲ್ಲಿ ಕಾಂಗ್ರೆಸ್​ನೊಂದಿಗೆ ಸ್ನೇಹ ಬೆಳೆಸಿದ್ದಾರೆ. ಅವರು ಯಾವ ಪಾರ್ಟಿಯಾದರೂ ಅಡ್ಜಸ್ಟ್ ಆಗುತ್ತಾರೆ ಎಂದು ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಅವಕಾಶವಾದಿ:

ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ, ಅವರಿಗೆ ಯಾವುದೇ ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ. ಸಿಎಂ ಆಗಿದ್ದಾಗ ಉಡಾಫೆಯಾಗಿ ವರ್ತಿಸಿದ್ದರು. ಅಧಿಕಾರದಲ್ಲಿದ್ದಾಗ ಜನರ ಬಳಿ ಹೋಗಲೇ ಇಲ್ಲ. ಈಗ ಅವರಿಗೆ ಆತಂಕ ಕಾಡುತ್ತಿದೆ ಎಂದರು.

ಈಗ ದಿನ ಬೆಳಗೆದ್ದು ಕುಮಾರಸ್ವಾಮಿ ಜನರ ಕಡೆ ಹೋಗುತ್ತಿದ್ದಾರೆ. ಜೆಡಿಎಸ್​​ನೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಮ್ಮ ಪಕ್ಷಕ್ಕೆ ತೊಂದರೆ ಆದೀತು. ಆದ್ದರಿಂದ ಅವರ ಅವಕಾಶವಾದಿ ಮನಸ್ಥಿತಿಯ ಬಗ್ಗೆ ನಮ್ಮ ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ನಾನು ರಾಜಕಾರಣದಲ್ಲಿ ಬಚ್ಚಾ ನಿಜ:

ಹೆಚ್​ಡಿಕೆ ಹೇಳಿದಂತೆ ರಾಜಕೀಯದಲ್ಲಿ ನಾನು ಬಚ್ಚಾ. ರಾಮನಗರಕ್ಕೆ ಮೊದಲ ಬಾರಿಗೆ ಬಂದಾಗ ಕುಮಾರ್ ಸ್ವಾಮಿ ಕೂಡ ಬಚ್ಚಾ. ಇಸ್ಪೀಟ್​ ಆಟದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಸರಿಯಾಗಿ ಗೊತ್ತು. ಸಿಂಗಾಪುರದಲ್ಲಿ ಕುಮಾರಸ್ವಾಮಿ ಇಸ್ಪೀಟ್​ ಆಡಿರೋದು ಗೊತ್ತಿಲ್ವಾ? ಇದರ ಫೋಟೋಗಳು ನನ್ನ ಬಳಿ ಇದೆ. ಬೇಕಾದರೆ ಬಿಡುಗಡೆ ಮಾಡುತ್ತೇನೆ ಎಂದರು.

Share This Article
Leave a comment