ನನಗೆ ನಾನೇ ಲಾಯರ್ – ಅನುಶ್ರೀ

Team Newsnap
0 Min Read

ಮಂಗಳೂರಿನ ಸಿಸಿಬಿ ಪೋಲೀಸರು ಅನುಶ್ರೀಯವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಶನಿವಾರ ಪಣಂಬೂರಿನ ಸಿಸಿಬಿ ಕಛೇರಿಗೆ ವಿಚಾರಣೆಗೆ‌ ಹಾಜರಾಗಿದ್ದರು.

ವಿಚಾರಣೆ ಮುಗಿದ ನಂತರ ಮಾಧ್ಯಮ ಜೊತೆ ಮಾತನಾಡಿದ ಅನುಶ್ರೀ’ ನನಗೆ ಕಿಶೋರ್ ಶೆಟ್ಟಿ, ತರುಣ್ ರಾಜ್ ಕಳೆದ 12 ವರ್ಷಗಳಿಂದಲೂ ಪರಿಚಯ. ಅವರಿಬ್ಬರೂ ನನಗೆ ಚೆನ್ನಾಗೇ ಗೊತ್ತು. ಆದರೆ ನಾನು ಅವರೊಡನೆ ಯಾವುದೇ ರೀತಿಯ ಪಾರ್ಟಿಗಳನ್ನು ಮಾಡಿಲ್ಲ’ ಎಂದಿದ್ದಾರೆ.

‘ನಾನು ಪಾರ್ಟಿ ಮಾಡಿರುವುದಕ್ಕೆ ಆಧಾರಗಳಾವೂ ಇಲ್ಲ. ಫೋಟೊ ಎಲ್ಲಿದೆ? ವಿಚಾರಣೆಗೆ ನನ್ನನ್ನು ಕರೆದದ್ದರಿಂದ ನಾನೊಬ್ಬಳೇ ಧೈರ್ಯವಾಗಿ ವಿಚಾರಣೆಗೆ ಬಂದಿದ್ದೇನೆ. ಈ ಕೇಸ್‌ನಲ್ಲಿ ನನಗೆ ನಾನೇ ಲಾಯರ್’ ಎಂದಿದ್ದಾರೆ.

Share This Article
Leave a comment