ಸಂಜೆ 05:37ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ( Chief Minister) ಬಸವರಾಜ್ ಬೊಮ್ಮಾಯಿ( Basavaraj Bommai ) ಸೇರಿದಂತೆ ಗಣ್ಯರಿಂದ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.ಇದನ್ನು ಓದಿ –ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಹಾಕಿದ KCR : ‘ಭಾರತ್ ರಾಷ್ಟ್ರ ಸಮಿತಿ’ ಹೊಸ ಪಕ್ಷ
ಪುಷ್ಪಾರ್ಚನೆ ಸಂದರ್ಭ ರಾಷ್ಟ್ರಗೀತೆ ( National Anthem) ನುಡಿಸುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಗೌರವ ಸೂಚಿಸಲಾಯಿತು.
ಮೈಸೂರಿನ ಅರಮನೆ ( Mysuru Palace ) ಆವರಣದಲ್ಲಿ 750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ನಾಡದೇವಿ ಚಾಮುಂಡೇಶ್ವರಿ ( Chamundeshwari ) ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ತನ್ನ ಗಜ ಗಾಂಭೀರ್ಯದಿಂದ ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿಯೊಂದಿಗೆ ಹೆಜ್ಜೆ ಹಾಕಿತು.
ಇದಕ್ಕೂ ಮುನ್ನ ಮೌಂಟೆಡ್ ಕೆ.ಆರ್.ಪಿ ಕಮಾಂಡೆಂಟ್ ಅವರಾದ ಎಂ.ಜಿ ನಾಗರಾಜ ಮತ್ತು ಎಸ್.ಡಿ.ಸಾಸನೂರು ಅವರ ನೇತೃತ್ವದಲ್ಲಿ 8 ತುಕಡಿಗಳಾದ 2 ಕೆ.ಎಸ್.ಆರ್.ಪಿ, 1 ಸಿ.ಎ.ಆರ್, 1 ಡಿ.ಎ.ಆರ್, 1 ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹಾಗೂ 1 ಗೃಹದಳದ ಮುಂದಾಳತ್ವದಲ್ಲಿ ಕ್ಯಾಪ್ಟನ್ ಅಭಿಮನ್ಯು ನಾಡದೇವಿ ಉತ್ಸವ ಮೂರ್ತಿಯನ್ನು ಹೊತ್ತು ರಾಜಬೀದಿಗಳಲ್ಲಿ ಸಾಗಿತು.
ಪುಷ್ಪಾರ್ಚನೆ ಸಲ್ಲಿಸುವ ವೇಳೆ ಮಹಾರಾಜ ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್, ಇಂಧನ ಸಚಿವರಾದ ವಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಮತ್ತು ದಸರಾ ( Dasara ) ವಿಶೇಷಾಧಿಕಾರಿಯವರಾದ ಡಾ.ಬಗಾದಿ ಗೌತಮ್, ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಅವರು ಪಾಲ್ಗೊಂಡಿದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು