ಫೆ. 29 ರಂದು ಹೊಸಕೋಟೆಯಲ್ಲಿ ಲೋಕಯುಕ್ತ ಜನ ಸಂಪರ್ಕ ಸಭೆ

Team Newsnap
1 Min Read

ಬೆಂಗಳೂರು ಗ್ರಾಮಾಂತರ: ಕರ್ನಾಟಕ ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರು ರವರ ನೇತೃತ್ವದಲ್ಲಿ ಹೊಸಕೋಟೆಯ ಅಂಬೇಡ್ಕರ್ ಭವನದಲ್ಲಿ ಫೆಬ್ರವರಿ 29 ರಂದು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಜನ ಸಂಪರ್ಕ ಸಭೆ ಮತ್ತು ಅಹವಾಲು ಸ್ವೀಕಾರ ಸಭೆಯನ್ನು ಏರ್ಪಡಿಸಲಾಗಿದೆ.

ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ ನಿರ್ಲಕ್ಷ್ಯ ಅಥವಾ ಅಧಿಕಾರ ದುರುಪಯೋಗ / ದುರಾಡಳಿತ ಮಾಡುತ್ತಿದ್ದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿಗಳ ಮೇಲೆ ಲಿಖಿತ ಅಹವಾಲುಗಳನ್ನು ಸ್ವೀಕರಿಸಲಿದ್ದೇವೆ.

ಇದನ್ನು ಓದಿ –ನನ್ನ ಸ್ಪರ್ಧೆ ಲೋಕಸಭಾ ಚುನಾವಣೆಯಲ್ಲಿ ಖಚಿತ : ಸುಮಲತಾ

ಸಾರ್ವಜನಿಕರ ದೂರುಗಳಿದ್ದಲ್ಲಿ ಫೆಬ್ರವರಿ 29 ರಂದು ಲಿಖಿತ ದೂರನ್ನು ದ್ವಿಪ್ರತಿಯಲ್ಲಿ ನೀಡಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಸಂಸ್ಥೆಯ ಪೋಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದೆ

Share This Article
Leave a comment