ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೂಚನಹಳ್ಳಿ ಸಮೀಪದ ಕೆರೆಯಲ್ಲಿ ತಾವರೆ ಹೂ ತರುವುದಕ್ಕೆ ಕೆರೆಗೆ ಇಳಿದಿದ್ದ ತಂದೆ, ಮಗ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ವರ ಮಹಾಲಕ್ಷೀ ಹಬ್ಬದ ಪ್ರಯುಕ್ತ ತಾವರೆ ಹೂ ತಂದು ಮಾರಾಟ ಮಾಡುವುದಕ್ಕೆ , ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯಲ್ಲಿನ ಕೆರೆಗೆ ತಂದೆ ಪುಟ್ಟರಾಜು(42) ಹಾಗೂ ಮಗ ಕೇಶವ್(14) ಇಳಿದಿದ್ದರು.
ಈ ವೇಳೆಯಲ್ಲಿ ಕೆರೆಯ ನೀರಿನಲ್ಲಿ ಮಗ ಕೇಶವ್ ಮುಳುಗುತ್ತಿದ್ದದ್ದು ಗಮನಿಸಿದ ತಂದೆ ಪುಟ್ಟರಾಜು ರಕ್ಷಿಸಲು ಹೋಗಿ, ಇಬ್ಬರೂ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರು ದೊಡ್ಡಬಳ್ಳಾಪುರದ ಶಾಂತಿನಗರ ನಿವಾಸಿಗಳು, ಈ ಸಂಬಂಧ ದೊಡ್ಡಬೆಳಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು