ಕೌಟುಂಬಿಕ ಕಲಹ : ಪತ್ನಿಯಿಂದಲೇ ಪತಿ ಹತ್ಯೆ

Team Newsnap
1 Min Read

ಕೌಟುಂಬಿಕ ಕಲಹದಿಂದ ಬೇಸತ್ತು ಹೆಂಡತಿಯೇ ಗಂಡನನ್ನು ಕತ್ತಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಬೊಳ್ಳು ಮಾಡುವಿನಲ್ಲಿ ಜರುಗಿದೆ.

ಈ ಪ್ರಕರಣದಲ್ಲಿ ಸುಂದರ ( 36) ಎಂಬ ವ್ಯಕ್ತಿ ಕೊಲೆಯಾಗಿದ್ದಾನೆ.ಕುಮಾರಸ್ವಾಮಿ ನನ್ನನ್ನು ಮೋಸದಿಂದ ಸೋಲಿಸಿದರು : ಯೋಗೇಶ್ವರ್

ಈತ ಕಾಫಿ ತೋಟದ ಲೈನ್ ಮನೆಯಲ್ಲಿ ತನ್ನ ಹೆಂಡತಿ, ಎರಡು ಮಕ್ಕಳೊಂದಿಗೆ ವಾಸವಾಗಿದ್ದನು.

ಪ್ರತಿನಿತ್ಯ ಗಂಡ ಹೆಂಡತಿಯ ನಡುವೆ ಜಗಳವಾಗುತ್ತಿತ್ತು ಇದರಿಂದ ಬೇಸತ್ತ ಪತ್ನಿ ತನ್ನ ಪತಿಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿ ವೇಲ್‍ನಿಂದ ಕುತ್ತಿಗೆ ಬಿಗಿದಿದ್ದಳು ಎನ್ನಲಾಗಿದೆ.

ವಿರಾಜಪೇಟೆ ಪೊಲೀಸರು ಭೇಟಿ. ನೀಡಿ ಹತ್ಯೆ ಮಾಡಿದ ಪತ್ನಿ ಶೋಭಾಳನ್ನು ಬಂಧಿಸಿದ್ದಾನೆ.

Share This Article
Leave a comment