ಏಪ್ರಿಲ್ – ಮೇ ತಿಂಗಳ ಬಿಸಿಲಿನ ಸಮಯಕ್ಕೆ ಜನರು ತಮ್ಮ ದೇಹಕ್ಕೆ ತಂಪನ್ನು ನೀಡುವ ಪಾನೀಯಗಳ ಮೊರೆ ಹೋಗುತ್ತಾರೆ.
ಬೀದಿ ಬದಿಯಲ್ಲಿ ದೊರೆಯುವ ಪಾನೀಯಗಳು ಕೆಮಿಕಲ್ ಮಿಶ್ರಿತವಾಗಿರುತ್ತೆ. ಅದು ಆರೋಗ್ಯವನ್ನು ಹದಗೆಡಿಸುವ ಸಾಧ್ಯತೆಯಿದೆ. ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿಯೇ ಪಾನೀಯಗಳನ್ನು ಮಾಡಿ ಕುಡಿದರೆ ಒಳ್ಳೆಯದು.
ಇವತ್ತು ಆರೋಗ್ಯಕರ ಹಾಗೂ ದೇಹಕ್ಕೆ ತಂಪೆನಿಸುವ ಡ್ರೈಫ್ರೂಟ್ಸ್ ಮಿಲ್ಕ್ಶೇಕ್ ರೆಸಿಪಿಯನ್ನು ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಅಂಜೂರದ ಹಣ್ಣು- 3ರಿಂದ 4
ಬಾದಾಮಿ- ಕಾಲು ಕಪ್
ಗೋಡಂಬಿ- ಕಾಲು ಕಪ್
ಒಣ ದ್ರಾಕ್ಷಿ – ಕಾಲು ಕಪ್
ಪಿಸ್ತಾ – ಕಾಲು ಕಪ್
ಖರ್ಜೂರ- 7ರಿಂದ 8
ತಣ್ಣಗಿನ ಹಾಲು- ಅರ್ಧ ಲೀಟರ್
ಕೇಸರಿ- ಸ್ವಲ್ಪ
ಸಕ್ಕರೆ- 2 ಚಮಚ
ಮಾಡುವ ವಿಧಾನ :
1) ಮೊದಲಿಗೆ ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನೆಹಾಕಿ ಅರ್ಧಗಂಟೆ ನೆನೆಯಲು ಬಿಡಿ. ಹಾಗೆಯೇ ಖರ್ಜೂರದ ಬೀಜವನ್ನು ತೆಗೆದು ಅದನ್ನೂ ಸಹ ನೆನೆಸಿ. ಖರ್ಜೂರ ಹಾಗೂ ಅಂಜೂರ ನೆನೆಸಿದ ಬಳಿಕ ಅದನ್ನು ಸಾಧಾರಣ ಗಾತ್ರದಲ್ಲಿ ಹೆಚ್ಚಿಕೊಳ್ಳಿ.
2) ಒಂದು ಮಿಕ್ಸಿ ಜಾರಿಗೆ ಎಲ್ಲಾ ಡ್ರೈಫ್ರೂಟ್ಸ್ಗಳನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ತಣ್ಣಗಿನ ಹಾಲನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ತೆಂಗಿನ ಹಾಲನ್ನು ಸಹ ಬಳಸಿಕೊಳ್ಳಬಹುದು. ಬಳಿಕ ಇದಕ್ಕೆ ಸ್ವಲ್ಪ ಕೇಸರಿಯನ್ನು ಸೇರಿಸಿಕೊಳ್ಳಿ. ಇದು ಉತ್ತಮ ರುಚಿಯನ್ನು ನೀಡುತ್ತದೆ.
3) ಇದಕ್ಕೆ ಉಳಿದ 2 ಕಪ್ ಹಾಲನ್ನು ಸೇರಿಸಿಕೊಂಡು ಮತ್ತೊಮ್ಮೆ ರುಬ್ಬಿಕೊಳ್ಳಿ. ಸಕ್ಕರೆ ಅಥವಾ ಬೆಲ್ಲ ಇಷ್ಟಪಡುವವರು 1ರಿಂದ 2 ಚಮಚ ಸಕ್ಕರೆ ಅಥವಾ ಬೆಲ್ಲವನ್ನೂ ಸೇರಿಸಿಕೊಂಡು ರುಬ್ಬಿ.ಇಂದಿನಿಂದ ರಾಜ್ಯದಲ್ಲಿ ಮತದಾನ ಆರಂಭ
ಈಗ ಈ ಮಿಲ್ಕ್ಶೇಕ್ ಅನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಿ. ಡ್ರೈಫ್ರೂಟ್ಸ್ ತಿನ್ನಲು ಇಚ್ಚಿಸುವವರು ಇದರ ಮೇಲೆ ಚಿಕ್ಕದಾಗಿ ಹೆಚ್ಚಿದ ಡ್ರೈಫ್ರೂಟ್ಸ್ ಅನ್ನು ಹಾಕಿ ಅಲಂಕರಿಸಿಕೊಳ್ಳಿ.
ಈಗ ರುಚಿಕಟ್ಟಾದ ಡ್ರೈಫ್ರೂಟ್ಸ್ ಮಿಲ್ಕ್ಶೇಕ್ ಸವಿಯಿರಿ.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment