ಮಂಡ್ಯದ 5 ರೂ ವೈದ್ಯ ಡಾ ಶಂಕರೇಗೌಡ ಹೃದಯಘಾತ – ಮೈಸೂರಿನಲ್ಲಿ ಚಿಕಿತ್ಸೆ : ಪ್ರಾಣಪಾಯದಿಂದ ಪಾರು

Team Newsnap
1 Min Read
5rs doctor Dr Shankaregowda has recovered

ಮಂಡ್ಯದ 5 ರೂ ಡಾಕ್ಟರ್ ಎಂದೇ ಖ್ಯಾತಿ ಆಗಿರುವ ಡಾ ಶಂಕರೇಗೌಡರಿಗೆ ಸೋಮವಾರ ಸಂಜೆ ಹೃದಯಘಾತವಾಗಿದೆ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,ಯಾವುದೇ ಪ್ರಾಣಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ –2023 ರ ರಾಜ್ಯ ವಿಧಾನ ಸಭೆ ಚುನಾವಣೆ ಪ್ರಚಾರ ಸಾರಥ್ಯಕ್ಕೆ ಪ್ರಿಯಾಂಕ ಗಾಂಧಿ – DKC

WhatsApp Image 2022 05 24 at 10.12.37 AM

ಕಳೆದ ಸಂಜೆ ಹೃದಯಘಾತವಾದ ನಂತರ ಡಾ ಶಂಕರೇಗೌಡರನ್ನ ಕೂಡಲೇ ಮೈಸೂರಿಗೆ ಕರೆದುಕೊಂಡು ಹೋಗಲಾಯಿತು,ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆಗಿರುವುದರಿಂದ ತಾತ್ಕಾಲಿಕವಾಗಿ ಸ್ಟಂಟ್ ಅಳವಡಿಸಲಾಗಿದೆ,ಒಂದು ವಾರದ ನಂತರ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆ ಇದೆಯೆಂದು ಕುಟುಂಬದ ಮೂಲಗಳು ಹೇಳಿವೆ.

ವೈದ್ಯ ಶಂಕರೇಗೌಡರಿಗೆ ಯಾವುದೇ ಪ್ರಾಣಾಪಾಯವಿಲ್ಲ ಕಳೆದ ರಾತ್ರಿಯಿಂದ ಕುಟುಂಬದವರ ಜೊತೆ ಮಾತಾಡುತ್ತಿದ್ದಾರೆ,ವಿಶ್ರಾಂತಿ ಅಗತ್ಯ ಇದೆ.

Share This Article
Leave a comment