ಇತ್ತೀಚಿಗೆ ದಿನಕ್ಕೆ ಒಂದಿಲ್ಲೊಂದು ಅತ್ಯಾಚಾರದ ಪ್ರಕರಣಗಳು ಕೇಳಿ ಬರುತ್ತಿವೆ. ಈಗ ಇಲ್ಲೊಂದಷ್ಟು ದುಷ್ಕರ್ಮಿಗಳು ಭಾರತದ ಪ್ರಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮಗಳನ್ನು ಅತ್ಯಾಚಾರ ಮಾಡುವದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಮ್ಯಾಚ್ನಲ್ಲಿ ಪ್ರತಿಬಾರಿಯಂತೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಜಿಕ್ ತೋರಿಸಲಾಗುತ್ತಿಲ್ಲ. ಕಳೆದ 12 ಸರಣಿಗಳಿಗೆ ಹೋಲಿಕೆ ಮಾಡಿದಲ್ಲಿ, ಈ ಸರಣಿಯ ಪಂದ್ಯಗಳಲ್ಲಿ ಸಿಎಸ್ಕೆ ಸರಿಯಾದ ಆಟವಾಡುತ್ತಿಲ್ಲ. ಇದರಿಂದ ಆಕ್ರೋಶಗೊಂಡಿರುವ ಕೆಲವು ದುಷ್ಕರ್ಮಿಗಳು ದೋನಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಪಂದ್ಯಗಳಲ್ಲಿ ಸರಿಯಾಗಿ ಆಡದಿದ್ದರೆ ಅವರ 6 ವರ್ಷದ ಮಗಳನ್ನು ಅತ್ಯಾಚಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಇದನ್ನು ಗಮನಿಸಿದರೆ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಕಳವಳ ಮೂಡದೇ ಇರದು. ಕೇವಲ 6 ವರ್ಷದ ಮಗುವಿಗೆ ತನ್ನ ತಂದೆಯ ಪ್ರೀತಿಯ ಹೊರತು ಬಾಹ್ಯ ಪ್ರಪಂಚದಲ್ಲಿ ಆತನ ಕೆಲಸ ಎಂತಹುದು? ಜವಾಬ್ದಾರಿ ಎಂತಹದು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಅಂತಹ ಹಸುಳೆ ಈ ವಿಕೃತ ಮನಸ್ಸಿನವರಿಗೆ ಏನು ಮಾಡಿದ್ದಾಳು?
ಅಲ್ಲದೇ ಪಂದ್ಯ ಎಂದ ಮೇಲೆ ಅದರಲ್ಲಿ ಒಬ್ಬರು ಸೋಲಬೇಕು. ಒಬ್ಬರು ಗೆಲ್ಲಬೇಕು. ಆದರೆ ಪಂದ್ಯವನ್ನು ಅತಿರೇಕಕ್ಕೆ ತೆಗೆದುಕೊಂಡು ಬೆದರಿಕೆ ಹಾಕುವ ಇಂತಹ ವಿಕೃತ ಮನಸ್ಸಿನವರ ಮೇಲೆ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಬೇಕು