ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ಮತ್ತೆ ‘ಧರ್ಮ ಸಂಕಟ’ ಶುರುವಾಗಿದೆ.
ಮುಸ್ಲಿಂಮರು ತಯಾರಿಸುವ ಹಿಂದೂ ದೇವರ ವಿಗ್ರಹಗಳನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡದಂತೆ ಹೊಸ ಅಭಿಯಾನ ಆರಂಭಿಸಲು ಸಿದ್ದತೆ ನಡೆದಿದೆ.
ಈ ಕುರಿತಂತೆ ಮೇಲುಕೋಟೆ ಸ್ಥಾನಿಕ ಶ್ರೀನಿವಾಸ್ ಅಯ್ಯಂಗಾರ್ ಹೇಳಿಕೆ ನೀಡಿ ಮುಸ್ಲಿಂಮವರು ತಯಾರಿಸಿದ ವಿಗ್ರಹ ಪೂಜೆ ಶಾಸ್ತ್ರದಲ್ಲಿ ನಿಷೇಧವಿದೆ. ಹೀಗಾಗಿ ನಿಷೇಧ ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ
ರಾಜ್ಯದ ಎಲ್ಲಾ ದೇವಸ್ಥಾನದ ಅರ್ಚಕರುಗಳಿಗೆ ಈ ಕುರಿತಂತೆ ನೀಡಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ವರದಿ ಕೇಳಿರುವ ಡಿಸಿ :
ಚಲುವನಾರಾಯಣ ಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿಯನ್ನು ಸ್ಥಗಿತ ಮಾಡಿ ಸಂಧ್ಯಾರಾತಿ ಎಂದು ಹೊಸ ನಾಮಕರಣ ಮಾಡವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಡಿಸಿ ಅಶ್ವತಿ ದೇವಸ್ಥಾನದ ಇಓ ಹಾಗೂ ಪಾಂಡವಪುರ ಎಸಿ ಬಳಿ ಈ ಕುರಿತಂತೆ ವರದಿ ಕೇಳಿದ್ದಾರೆ.
ದೇವಸ್ಥಾನ ಆರತಿಗೆ ಸಲಾಂ ಪದದ ಬಳಕೆಯನ್ನು ತೆಗೆದು ಹಾಕಿ ಸಂಧ್ಯಾರಾತಿ ಎಂದು ನಾಮಕರಣ ಮಡುವಂತೆ ಧಾರ್ಮಿಕ ಪರಿಷತ್ ಒತ್ತಾಯಿಸಿದೆ.
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ