February 21, 2026

Newsnap Kannada

The World at your finger tips!

melukote 1

ಮೇಲುಕೋಟೆಯ ಚಲುವನಾರಾಯಣ ಸ್ವಾಮಿಯನ್ನೂ ಬಿಡದ ‘ಧರ್ಮ ಸಂಕಟ’

Spread the love

ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ಮತ್ತೆ ‘ಧರ್ಮ ಸಂಕಟ’ ಶುರುವಾಗಿದೆ.

ಮುಸ್ಲಿಂಮರು ತಯಾರಿಸುವ ಹಿಂದೂ ದೇವರ ವಿಗ್ರಹಗಳನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡದಂತೆ ಹೊಸ ಅಭಿಯಾನ ಆರಂಭಿಸಲು ಸಿದ್ದತೆ ನಡೆದಿದೆ.

ಈ ಕುರಿತಂತೆ ಮೇಲುಕೋಟೆ ಸ್ಥಾನಿಕ ಶ್ರೀನಿವಾಸ್ ಅಯ್ಯಂಗಾರ್ ಹೇಳಿಕೆ ನೀಡಿ ಮುಸ್ಲಿಂಮವರು ತಯಾರಿಸಿದ ವಿಗ್ರಹ ಪೂಜೆ ಶಾಸ್ತ್ರದಲ್ಲಿ ನಿಷೇಧವಿದೆ. ಹೀಗಾಗಿ ನಿಷೇಧ ಅಭಿಯಾನ ಆರಂಭಿಸುವುದಾಗಿ ಹೇಳಿದ್ದಾರೆ

ರಾಜ್ಯದ ಎಲ್ಲಾ ದೇವಸ್ಥಾನದ ಅರ್ಚಕರುಗಳಿಗೆ ಈ ಕುರಿತಂತೆ ನೀಡಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

ವರದಿ ಕೇಳಿರುವ ಡಿಸಿ :
ಚಲುವನಾರಾಯಣ ಸ್ವಾಮಿಗೆ ಸಲ್ಲುವ ದೀವಟಿಗೆ ಸಲಾಂ ಆರತಿಯನ್ನು ಸ್ಥಗಿತ ಮಾಡಿ ಸಂಧ್ಯಾರಾತಿ ಎಂದು ಹೊಸ ನಾಮಕರಣ ಮಾಡವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಡಿಸಿ ಅಶ್ವತಿ ದೇವಸ್ಥಾನದ ಇಓ ಹಾಗೂ ಪಾಂಡವಪುರ ಎಸಿ ಬಳಿ ಈ ಕುರಿತಂತೆ ವರದಿ ಕೇಳಿದ್ದಾರೆ.

ದೇವಸ್ಥಾನ ಆರತಿಗೆ ಸಲಾಂ ಪದದ ಬಳಕೆಯನ್ನು ತೆಗೆದು ಹಾಕಿ ಸಂಧ್ಯಾರಾತಿ ಎಂದು ನಾಮಕರಣ ಮಡುವಂತೆ ಧಾರ್ಮಿಕ ಪರಿಷತ್ ಒತ್ತಾಯಿಸಿದೆ.

error: Content is protected !!