ಕುಬೇರ ಕುಪೇಂದ್ರ : ಪುಟ್ಟರಾಜು, ಜಮೀರ್ ಸೇರಿ ದೇವೇಗೌಡರ ಫ್ಯಾಮಿಲಿಗೆನೇ ಸಾಲ ಕೊಟ್ಟ ಇಂದ್ರ !

Team Newsnap
1 Min Read

ಇದೊಂದು ಸಂಗತಿ ನಿಮಗೆ ತಿಳಿದಿರಲಿ ಕುಬೇರ ಕುಪೇಂದ್ರ ರೆಡ್ಡಿ ಶಾಸಕ ಸಿ ಎಸ್ ಪುಟ್ಟರಾಜು, ಜಮೀರ್ ಅಮ್ಮದ್ ಖಾನ್ ಸೇರಿ ದೇವೇಗೌಡರ ಫ್ಯಾಮಿಲಿ ಸದಸ್ಯರಿಗೆ ಸಾಲ ಕೊಟ್ಟ ಇಂದ್ರ !

ಈ ಸಂಗತಿಯನ್ನು ಜೆಡಿಎಸ್‍ನಿಂದ ರಾಜ್ಯಸಭೆಗೆ ಸ್ಪರ್ಧೆ ಮಾಡಿರುವ ಉದ್ಯಮಿ ಕುಪೇಂದ್ರ ರೆಡ್ಡಿ ನಾಮಪತ್ರದ ಜೊತೆ ಸಲ್ಲಿಕೆ ಮಾಡಿರುವ ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ. ಕೆಲ ಅಂಶಗಳು ಕುತೂಹಲಕ್ಕೆ ಕಾರಣವಾಗಿವೆ.

ಕುಪೇಂದ್ರ ರೆಡ್ಡಿ ಯಾರ್ಯಾರಿಗೆ ಸಾಲ ನೀಡಿದ್ದಾರೆ ಎಂಬ ಪಟ್ಟಿ ಈಗ ಎಲ್ಲರ ಗಮನ ಸೆಳೆದಿದೆ. ಕಾರಣ ದೇವೇಗೌಡರ ಕುಟುಂಬದ ಹಲವರು ಸಾಲ ಪಡೆದುಕೊಂಡ ಪಟ್ಟಿಯಲ್ಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್‍.ಡಿ.ರೇವಣ್ಣ, ಅವರಿಂದ ಸಾಲ ಪಡೆಯಬಾರದು ಎಂಬ ನಿಯಮ ಏನಾದ್ರೂ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ – ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ದುಬಾರಿ ದರ ತೆತ್ತಲು ರೆಡಿನಾ

ಸಾಲ ಪಡೆದವರು ಯಾರು? ಎಷ್ಟು ಹಣ ಪಡೆದಿದ್ದಾರೆ ?

  • ಭವಾನಿ ರೇವಣ್ಣ – 2 ಕೋಟಿ ರೂ.
  • ಪ್ರಜ್ವಲ್ ಆರ್ – 1 ಕೋಟಿ ರೂ.
  • ಹೆಚ್‍.ಡಿ.ರಮೇಶ್ – 3.90 ಕೋಟಿ ರೂ.
  • ಸೂರಜ್ – 5.80 ಕೋಟಿ ರೂ.
  • ಜಮೀರ್ ಅಹಮದ್ ಖಾನ್ – 1 ಕೋಟಿ ರೂ.
  • ಸಿಎಸ್ ಪುಟ್ಟರಾಜು – 1.5 ಕೋಟಿ ರೂ.
  • ಚನ್ನಾಂಬಿ ಕ ಫಿಲಮ್ಸ್ – 4 ಕೋಟಿ ರೂ.

ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ

ಸಾಲ ತೆಗೆದುಕೊಳ್ಳಬಾರದು ಅಂತ ಎಲ್ಲಾದರೂ ಇದೆಯಾ? ಅದು 4 ವರ್ಷಗಳ ಹಿಂದೆ ಚುನಾವಣೆಗೆ ಸಾಲ ಮಾಡಿರುವುದು. ಕದ್ದು ಮುಚ್ಚಿ ತಗೊಂಡಿಲ್ಲ. ಎಲ್ಲವನ್ನು ಅಕೌಂಟ್ ಮೂಲಕವೇ ತೆಗೆದುಕೊಂಡಿದ್ದೇವೆ. ಪುಕ್ಸಟ್ಟೆ ಯಾವ ಹಣವೂ ತೆಗೆದುಕೊಂಡಿಲ್ಲ. ಎಲ್ಲದ್ದಕ್ಕೂ ದಾಖಲಾತಿ ಇದೆ ಎಂದು ತಿಳಿಸಿದರು.

Share This Article
Leave a comment