ಇದೊಂದು ಸಂಗತಿ ನಿಮಗೆ ತಿಳಿದಿರಲಿ ಕುಬೇರ ಕುಪೇಂದ್ರ ರೆಡ್ಡಿ ಶಾಸಕ ಸಿ ಎಸ್ ಪುಟ್ಟರಾಜು, ಜಮೀರ್ ಅಮ್ಮದ್ ಖಾನ್ ಸೇರಿ ದೇವೇಗೌಡರ ಫ್ಯಾಮಿಲಿ ಸದಸ್ಯರಿಗೆ ಸಾಲ ಕೊಟ್ಟ ಇಂದ್ರ !
ಈ ಸಂಗತಿಯನ್ನು ಜೆಡಿಎಸ್ನಿಂದ ರಾಜ್ಯಸಭೆಗೆ ಸ್ಪರ್ಧೆ ಮಾಡಿರುವ ಉದ್ಯಮಿ ಕುಪೇಂದ್ರ ರೆಡ್ಡಿ ನಾಮಪತ್ರದ ಜೊತೆ ಸಲ್ಲಿಕೆ ಮಾಡಿರುವ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ. ಕೆಲ ಅಂಶಗಳು ಕುತೂಹಲಕ್ಕೆ ಕಾರಣವಾಗಿವೆ.
ಕುಪೇಂದ್ರ ರೆಡ್ಡಿ ಯಾರ್ಯಾರಿಗೆ ಸಾಲ ನೀಡಿದ್ದಾರೆ ಎಂಬ ಪಟ್ಟಿ ಈಗ ಎಲ್ಲರ ಗಮನ ಸೆಳೆದಿದೆ. ಕಾರಣ ದೇವೇಗೌಡರ ಕುಟುಂಬದ ಹಲವರು ಸಾಲ ಪಡೆದುಕೊಂಡ ಪಟ್ಟಿಯಲ್ಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ.ರೇವಣ್ಣ, ಅವರಿಂದ ಸಾಲ ಪಡೆಯಬಾರದು ಎಂಬ ನಿಯಮ ಏನಾದ್ರೂ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ – ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ದುಬಾರಿ ದರ ತೆತ್ತಲು ರೆಡಿನಾ
ಸಾಲ ಪಡೆದವರು ಯಾರು? ಎಷ್ಟು ಹಣ ಪಡೆದಿದ್ದಾರೆ ?
- ಭವಾನಿ ರೇವಣ್ಣ – 2 ಕೋಟಿ ರೂ.
- ಪ್ರಜ್ವಲ್ ಆರ್ – 1 ಕೋಟಿ ರೂ.
- ಹೆಚ್.ಡಿ.ರಮೇಶ್ – 3.90 ಕೋಟಿ ರೂ.
- ಸೂರಜ್ – 5.80 ಕೋಟಿ ರೂ.
- ಜಮೀರ್ ಅಹಮದ್ ಖಾನ್ – 1 ಕೋಟಿ ರೂ.
- ಸಿಎಸ್ ಪುಟ್ಟರಾಜು – 1.5 ಕೋಟಿ ರೂ.
- ಚನ್ನಾಂಬಿ ಕ ಫಿಲಮ್ಸ್ – 4 ಕೋಟಿ ರೂ.
ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ
ಸಾಲ ತೆಗೆದುಕೊಳ್ಳಬಾರದು ಅಂತ ಎಲ್ಲಾದರೂ ಇದೆಯಾ? ಅದು 4 ವರ್ಷಗಳ ಹಿಂದೆ ಚುನಾವಣೆಗೆ ಸಾಲ ಮಾಡಿರುವುದು. ಕದ್ದು ಮುಚ್ಚಿ ತಗೊಂಡಿಲ್ಲ. ಎಲ್ಲವನ್ನು ಅಕೌಂಟ್ ಮೂಲಕವೇ ತೆಗೆದುಕೊಂಡಿದ್ದೇವೆ. ಪುಕ್ಸಟ್ಟೆ ಯಾವ ಹಣವೂ ತೆಗೆದುಕೊಂಡಿಲ್ಲ. ಎಲ್ಲದ್ದಕ್ಕೂ ದಾಖಲಾತಿ ಇದೆ ಎಂದು ತಿಳಿಸಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು