ದೆಹಲಿಯಲ್ಲಿ ಶುಕ್ರವಾರ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಪೋಟಗೊಂಡ ಬಾಂಬ್ ಗೆ ಇರಾನ್ ಲಿಂಕ್ ಇದೆ ಎಂಬ ಅನುಮಾನ ಹೆಚ್ಚಾಗುತ್ತಿದೆ.
ಇಸ್ರೇಲ್ ನಡೆಸಿದ ಧಾಳಿಯಲ್ಲಿ ಇರಾನ್ ಪರಮಾಣು ಪಿತಾಮಹ ಹತ್ಯೆ ಯಾಗಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದ್ದ ಬೆನ್ನಲ್ಲೇ ಈ ಅನುಮಾನ ತನಿಖೆಗೆ ಮತ್ತೊಂದು ಆಯಾಮ ಸೃಷ್ಟಿಸಿ ಕೊಟ್ಟಿದೆ.
ಭಾರತ ಹಾಗೂ ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಏರ್ಪಟ್ಟು 29 ನೇ ವರ್ಷಾಚರಣೆಯ ಕಾರ್ಯಕ್ರಮದ ದಿನವೇ ಇಂತಹ ಸ್ಪೋಟ ಸಂಭವಿಸಿ ರುವುದು ಅನುಮಾನ ಕ್ಕೆ ಪ್ರೇರಣೆಯಾಗಿದೆ.
ಈ ನಡುವೆ ವಿಶೇಷ ತನಿಖಾ ತಂಡವು ತನಿಖೆ ಚುರುಕು ಮಾಡಿದೆ. ನಿನ್ನೆ ಸ್ಫೋಟ ಗೊಂಡ ಸ್ಥಳದಲ್ಲಿ ನ ಸಿಸಿಟಿವಿ ಪರಿಶೀಲನೆ ಮಾಡಿದ ವೇಳೆ ಇಬ್ಬರು ಯುವಕರು ಕಾರನಿಂದ ಇಳಿದು ಹೋಗುವ ದೃಷ್ಯ ಸೆರೆಯಾಗಿದೆ.
ಕಾರಿನ ಚಾಲಕನನ್ನು ಬಂಧಿಸಿರುವ ವಿಶೇಷ ತನಿಖಾ ತಂಡ ಶೀಘ್ರದಲ್ಲೇ ಮತ್ತಿಬ್ಬರನ್ನು ಬಂಧಿಸುವ ವಿಶ್ಬಾಸ ಹೊಂದಿದೆ.