ಜಮೀನು ಬಿಟ್ಟುಕೊಡದಿದ್ದಕ್ಕೆ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು! ಮಂಡ್ಯದಲ್ಲಿ ರೈತ ಕುಟುಂಬ ಬೀದಿಗೆ

Team Newsnap
1 Min Read
Pay Farmer Abhiyan from Mandya Farmers: Pay Rs 4500 per ton of sugarcane - farmers demand ಮಂಡ್ಯ ರೈತರಿಂದಲೂ ಪೇ ಫಾರ್ಮರ್ ಅಭಿಯಾನ : ಟನ್ ಕಬ್ಬಿಗೆ 4500 ರು ಕೊಡಿ - ರೈತರ ಒತ್ತಾಯ

ಒಂದೆಡೆ ಜಮೀನಿನಲ್ಲಿ ಬಿದ್ದಿರುವ ತೆಂಗಿನ ಗಿಡಗಳು . ಮತ್ತೊಂದೆಡೆ ಕಿತ್ತೆಸೆದಿರುವ ಟೊಮೆಟೋ ಸಸಿಗಳು.. ಇನ್ನೊಂದು ಕಡೆ ಕಣ್ಣೀರು ಹಾಕಿ ‌ ಗೋಳಾಡುತ್ತಿರುವ ರೈತರು..

ಇದನ್ನು ಓದಿ –ಚಿತ್ರನಟ ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

  • ಈ ಮನಕಲಕುವ ದೃಶ್ಯಗಳು ಕಂಡುಬಂದಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ ಶ್ಯಾನುಬೋಗನಹಳ್ಳಿಯಲ್ಲಿ. ವೈಯಕ್ತಿಕ ದ್ವೇಷದಿಂದಾಗಿ
    ಬೆಳೆ ನಾಶ ಮಾಡಿಕೊಂಡ ಎ ಶ್ಯಾನುಬೋಗನಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್‌ ಕುಟುಂಬ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ.

1 ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು. ಆದರೀಗ ಲಕ್ಷಾಂತರ ರೂ‌ಪಾಯಿ ಮೌಲ್ಯದ ಬೆಳೆಯನ್ನು ನಾಶ ಮಾಡಿದ್ದು, ರೈತ ಕುಟುಂಬದ ಜೀವನ ಅತಂತ್ರವಾಗಿದ್ದು, ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದಾರೆ.

ಕುಟುಂಬಕ್ಕೂ ಬಹಿಷ್ಕಾರ :

ಈ ಜಮೀನಿನ ಮೇಲೆ ಕಣ್ಣು ಹಾಕಿದ್ದ ಗ್ರಾಮದ ಕೆಲವರು ಈ ವಿಚಾರವಾಗಿ ತಗಾದೆ ತೆಗೆದು ಜಮೀನು ಬಿಟ್ಟು ಕೊಡವಂತೆ ಕೇಳಿದ್ದರು. ಈ ವಿಚಾರದಲ್ಲಿ ಗ್ರಾಮದಲ್ಲಿ ಕೆಲವು ಬಾರಿ ಗಲಾಟೆ ಕೂಡ ನಡೆದು ರಾಜಿ ಪಂಚಾಯಿತಿ ಕೂಡ ಆಗಿತ್ತು. ಜಮೀನು ಬಿಟ್ಟು ಕೊಡಲು ಒಪ್ಪದಿದ್ದ ಈ ಕುಟುಂಬವನ್ನು ಹೇಗಾದರೂ ಮಾಡಿ ಗ್ರಾಮದಿಂದ ಓಡಿಸಿ ಈ ಜಮೀನು ಕಬಳಿಸಬೇಕೆಂದು ನಿರ್ಧರಿಸಿದ ಕೆಲವರು ಈ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿಸಿದ್ದಾರೆ.

ಬಹಿಷ್ಕಾರದ ಬಳಿಕ ಸೋಮವಾರ ರಾತ್ರಿ ಆ ರೈತ ಕುಟುಂಬ ವ್ಯವಸಾಯ ಮಾಡ್ತಿದ್ದ ಜಮೀನಿನಲ್ಲಿ ಬೆಳೆದಿದ್ದ 70 ತೆಂಗಿನ ಸಸಿಗಳು ಸೇರಿ 7 ಸಾವಿರ ಟೊಮೆಟೋ ಸಸಿಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಕಿಡಿಗೇಡಿಗಳ ದುಷ್ಕೃತ್ಯಕ್ಕೆ ರೈತ ಕುಟುಂಬ ಹಿಡಿಶಾಪ ಹಾಕುತ್ತಿದೆ.

ಈ ಘಟನೆ ಸಂಬಂಧ ನೊಂದ ರೈತ ಕುಟುಂಬ ನಾಗಮಂಗಲ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದೆ. ತಾಲೂಕು ಆಡಳಿತ ಸೇರಿ ಸ್ಥಳೀಯ ಶಾಸಕರಿಗೂ‌ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

Share This Article
Leave a comment