ನಾಗಚೈತನ್ಯ ಸಿನಿಮಾ ಶೂಟಿಂಗ್​ ವೇಳೆ ಅವಘಡ : ಮೇಲುಕೋಟೆಯ ಕಲ್ಯಾಣಿಯಲ್ಲಿ ಸಿಲುಕಿಕೊಂಡ ಕ್ರೇನ್

Newsnap Team
1 Min Read

ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ತೆಲುಗು ನಟ ನಾಗಚೈತನ್ಯ ನಟನೆಯ ಸಿನಿಮಾ ಚಿತ್ರಿಕರಣದ ವೇಳೆ ಕ್ರೇನ್​ ಕಲ್ಯಾಣಿಯಲ್ಲಿ ಸಿಲುಕಿದೆ

ಇದರಿಂದ ಕಲ್ಯಾಣಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಇತ್ತೀಚಿಗೆ ತಮಿಳು ಬಂಗಾರರಾಜು-2 ಸಿನಿಮಾದ ಸಿನಿಮಾ ಚಿತ್ರಿಕರಣದ ವೇಳೆ ಇಂತಹದ್ದೇ ಯಡವಟ್ಟು ಸಂಭವಿಸಿತ್ತು

ಈ ಬೆನ್ನಲ್ಲೇ ಇದೀಗ ತೆಲುಗು ಸ್ಟಾರ್​ ನಟ ನಾಗಚೈತನ್ಯ ಅಭಿನಯದ ಸಿನಿಮಾ ಚಿತ್ರಿಕರಣದ ವೇಳೆ ಕಲ್ಯಾಣಿಯಲ್ಲಿ ಕ್ರೇನ್​ ಸಿಲುಕಿಕೊಂಡು ಅವಾಂತರ ಸೃಷ್ಟಿಸಿದೆ.

ಜಿಲ್ಲೆಯ ಮೇಲುಕೋಟೆಯಲ್ಲಿ
ಅನುಮತಿ ಪಡೆಯದೇ ನಿಯಮಗಳನ್ನು ಉಲ್ಲಂಘಿಸಿ ಕಲ್ಯಾಣಿಯಲ್ಲಿ ಕ್ರೇನ್​ ಮೂಲಕ ಶೂಟಿಂಗ್​ ನಡೆಸಿರುವ ಆರೋಪ ಕೇಳಿ ಬಂದಿದೆ.

ಎರಡು ದಿನಗಳ ಕಾಲ ಮಳೆಯಾಗಿದ್ದರಿಂದ ಮಣ್ಣು ತೇವವಿದ್ದು ಪರಿಣಾಮ ಕ್ರೇನ್​ ಕಲ್ಯಾಣಿಯಲ್ಲಿ ಜಾರಿ ಸಿಕ್ಕಿ ಹಾಕಿಕೊಂಡಿದೆ.

ಇನ್ನು ಕ್ರೇನ್​ ಮೇಲೆಕ್ಕೆತ್ತುವಾಗ ಐತಿಹಾಸಿಕ ಕಲ್ಯಾಣಿಯ ಕಲ್ಲುಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Share This Article
Leave a comment