ಸಿಎಂ ಬೆಂಬಲಕ್ಕೆ ನಿಂತ ಸ್ವಾಮೀಜಿಗಳಿಗೂ‌ ಕವರ್ ವಿತರಣೆ!

Team Newsnap
1 Min Read

ಸಿಎಂ‌ ನಿವಾಸಕ್ಕೆ ಭೇಟಿ ನೀಡಿ, ಸಿಎಂ ಯಡಿಯೂರಪ್ಪ ನವರಿಗೆ ಬೆಂಬಲ ಸೂಚಿಸಲು ಬಂದ ಸ್ವಾಮೀಜಿಗಳಿಗೆ ಕೊಡಲಾದ ಕವರ್ ನಲ್ಲಿ ಏನಿತ್ತು‌ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ‌

ಕೆ ಆರ್ ಡಿ ಸಿಎಲ್ ಅಧ್ಯಕ್ಷ ಎಂ ರುದ್ರೇಶ್ ಸ್ವತಃ ಸ್ವಾಮೀಜಿಗಳಿಗೆ ಕವರ್ ಹಂಚುತ್ತಿದ್ದಾರೆ. ಈ ಸಂಗತಿ ಬಗ್ಗೆ ವಿಡಿಯೋ ವೈರಲ್ ಆಗಿದೆ.

ಆದರೆ ಈ ಕವರ್ ನಲ್ಲಿ ಕ್ಯಾಷ್ ಇದೆಯೋ , ಚೆಕ್ ಇದೆಯೋ ಅಥವಾ ಖಾಲಿ ಕವರ್ ಕೊಟ್ಟು ಸ್ವಾಮೀಜಿಗಳ ಸಮೂಹವನ್ನೇ ಯಾಮಾರಿಸಲಾಯಿತೆ ಎಂಬ ಅನೇಕ ತರ್ಕಕ್ಕೆ ಸಿಗದೇ ಇರುವ ಅನೇಕ ಪ್ರಶ್ನೆಗಳನ್ನು ತಲೆಗೆ ಹುಳು ಬಿಟ್ಟು ಕೊಂಡು ಉತ್ತರ ಹುಡುಕುತ್ತಿದ್ದಾರೆ.

ಸ್ವಾಮೀಜಿಗಳಿಗೆ ಕವರ್ ಹಂಚುವ ದೃಷ್ಯದ ವಿಡಿಯೋ ವೈರಲ್ ಅಗಿದೆ. ಕವರ್ ಹಂಚಿಕೆ ಮಾತ್ರ ನಿಗೂಢವಾಗಿ ಉಳಿದಿಲ್ಲ. ಆದರೆ ಕವರ್ ಒಳಗೆ ಏನಿತ್ತು ಎಂಬುದು ನಿಗೂಢವಾಗಿ ಹೊಯ್ತು.‌

Share This Article
Leave a comment