ರಾಷ್ಟ್ರೀಯ

ಯುವಕರ ಸ್ಫೂರ್ತಿ : ಐಪಿಎಸ್​ ಅಧಿಕಾರಿ ಅಮಿತ್​ ಲೋಧಾ ವಿರುದ್ಧ ಭ್ರಷ್ಟಾಚಾರ ಆರೋಪ: FIR ದಾಖಲು

ನೆಟ್​ಫ್ಲಿಕ್ಸ್​ನಲ್ಲಿ ತೆರೆಕಂಡ ‘ಖಾಕಿ’ ವೆಬ್​ ಸರಣಿಯ ಮೂಲಕ ಅನೇಕ ಯುವ ಮನಸ್ಸುಗಳಲ್ಲಿ ಸ್ಫೂರ್ತಿ ತುಂಬಿದ್ದ ಬಿಹಾರ ಕೇಡರ್​ನ ಐಪಿಎಸ್​ ಅಧಿಕಾರಿ ಅಮಿತ್​ ಲೋಧಾ ವಿರುದ್ಧ ಬಿಹಾರ ಪೊಲೀಸ್​ ಇಲಾಖೆಯ ವಿಶೇಷ ನಿಗಾ ಘಟಕ ಎಫ್​ಐಆರ್​ ದಾಖಲಿಸಿದೆ.

ಅಮಿತ್​ ಲೋಧಾ ಬರೆದಿದ್ದ ‘ಬಿಹಾರ ಡೈರೀಸ್​’ ಪುಸ್ತಕ ಆಧರಿಸಿ ಖಾಕಿ ವೆಬ್​ ಸರಣಿ ನಿರ್ಮಾಣವಾಗಿತ್ತು. ಈಗ ಲೋಧಾ ವಿರುದ್ಧವೇ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಬಿ) ಕ್ರಿಮಿನಲ್ ಪಿತೂರಿ ಮತ್ತು 168 (ಸಾರ್ವಜನಿಕ ಸೇವಕ ಕಾನೂನುಬಾಹಿರವಾಗಿ ವ್ಯಾಪಾರದಲ್ಲಿ ತೊಡಗಿರುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಖಾಕಿ ವೆಬ್ ಸರಣಿಗೆ ಲೋಧಾ ಅವರು ಕಪ್ಪುಹಣ ಬಳಸಿದ್ದಾರೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಲೋಧಾ ಪುಸ್ತಕ ಬರೆಯಲು ಮತ್ತು ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅಧಿಕಾರ ಹೊಂದಿಲ್ಲ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಸರ್ಕಾರಿ ನೌಕರನಾಗಿದ್ದರೂ, ಮಗಧ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ಸಮಯದಲ್ಲಿ ಅಮಿತ್ ಲೋಧಾ ಅವರು ನೆಟ್‌ಫ್ಲಿಕ್ಸ್ ಮತ್ತು ಖಾಕಿ ವೆಬ್ ಸರಣಿಗಳನ್ನು ನಿರ್ಮಿಸುವ ಕಂಪನಿಯಾದ ಫ್ರೈಡೇ ಸ್ಟೋರಿ ಟೆಲ್ಲರ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಅಕ್ರಮವಾಗಿ ಖಾಸಗಿ/ವಾಣಿಜ್ಯ ಚಟುವಟಿಕೆಗಳಿಗೆ ಪ್ರವೇಶಿಸಿದ್ದಾರೆ ಎಂದು ಎಫ್‌ಐಆರ್​ನಲ್ಲಿ ಉಲ್ಲೇಖವಾಗಿದೆ. ಆನ್‌ ಲೈನ್‌ ನ ಪ್ರಥಮ ಕನ್ನಡ ಶಿಕ್ಷಕಿ ಎಸ್ತರ್‌ ಶಾಮಸುಂದರ್

ಅಕ್ರಮವಾಗಿ ಸಂಪಾದಿಸಲು ಮತ್ತು ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು, ಲೋಧಾ ಅವರು ಕಾನೂನುಬಾಹಿರ ಚಟುವಟಿಕೆಗಳನ್ನು ಆಶ್ರಯಿಸಿದ್ದಾರೆ. ‘ಖಾಕಿ ದಿ ಬಿಹಾರ್ ಚಾಪ್ಟರ್’ ವೆಬ್ ಸರಣಿಯ ನಿರ್ಮಾಣಕ್ಕಾಗಿ ಅವರೇ ಬರೆದ ‘ಬಿಹಾರ್ ಡೈರಿ’ ಪುಸ್ತಕವನ್ನು ಬಳಸಿದ್ದಾರೆ’ ಎಂದು ಎಫ್‌ಐಆರ್​ನಲ್ಲಿ ಆರೋಪಿಸಲಾಗಿದೆ.

Team Newsnap
Leave a Comment
Share
Published by
Team Newsnap

Recent Posts

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 1, 2024

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024