ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್: ರಾಮನಗರದಲ್ಲೇ ಅಂತ್ಯ

Team Newsnap
1 Min Read

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪಾದಯಾತ್ರೆ ಯನ್ನು ರದ್ದು ಮಾಡಲಾಗಿದೆ

ರಾಜ್ಯ ಸಕಾ೯ರ ಹಾಗೂ ಕಾಂಗ್ರೆಸ್ ಹೈ ಕಮಾಂಡ್ ಸಲಹೆ ಮೇರೆಗೆ ಪಾದಯಾತ್ರೆ ಕೈ ಬಿಡುವ ನಿಧಾ೯ರ ಮಾಡಿದ್ದಾರೆ

ರಾಮನಗರದಲ್ಲಿ ಗುರುವಾರ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಪಾದಯಾತ್ರೆ ಮೊಟಕುಗೊಳಿಸುವ ನಿಧಾ೯ರ ಕೈಗೊಳ್ಳಲಾಯಿತು

ಪಾದಯಾತ್ರೆ ಮೂಲಕವೇ ಬೆಂಗಳೂರಿಗೆ ಹೋದರೆ ಕೊರೊನಾ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುವ ಕಾರಣಕ್ಕಾಗಿ ಈ ನಿಧಾ೯ರ ಮಾಡಲಾಗಿದೆ.

ತಾತ್ಕಾಲಿಕವಾಗಿ ಪಾದಯಾತ್ರೆ ಸ್ಥಗಿತಗೊಳಿಸಿದ್ದೇವೆ, ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಆರಂಭ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹೈಕೋರ್ಟ್ ಅಭಿಪ್ರಾಯಕ್ಕೆ ಬೆಲೆ ಕೊಟ್ಟಿದ್ದೇವೆ,ಜನಾಭಿಪ್ರಾಯಕ್ಕೆ ಮಣಿದು ಪಾದಯಾತ್ರೆ ವಾಪಸ್ಸ್ ತೆಗೆದುಕೊಂಡಿದ್ದೇವೆ,ಜನರೇ ನಮಗೆ ದೇವರು ಡಿ ಕೆ ಶಿವಕುಮಾರ್ ಹೇಳಿಕೆ.

Share This Article
Leave a comment