ಬೆಂಗಳೂರಿನಲ್ಲಿ ಕಾಲೇಜ್ ವಿವಾದ: ನಟಿ ಶ್ರೀಲೀಲಾ ತಾಯಿಗೆ ಬಂಧನದ ಭೀತಿ

Team Newsnap
1 Min Read

ಸುಧೀರ್ ಅಂಗೂರ್ ಮಾಲೀಕತ್ವದ ಬೆಂಗಳೂರಿನ ಪ್ರತಿಷ್ಠಿತ ಅಲಯನ್ಸ್ ಯುನಿವರ್ಸಿಟಿಯನ್ನು ರಾಜಕಾರಣಿಯೊಬ್ಬರಿಗೆ ಮಾರಾಟ ಮಾಡಲು ಡೀಲ್ ಕುದುರಿಸಿದ ಹಾಗೂ ವಿವಿಗೆ ಗೂಂಡಾಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಕುಲಪತಿ ಮಧುಕರ್ ಅಂಗೂರ್ ಮತ್ತು ಸ್ಯಾಂಡಲ್​ವುಡ್ ನಟಿ ಶ್ರೀಲೀಲಾರ ತಾಯಿ ಸ್ವರ್ಣಲತಾ ವಿರುದ್ಧ ದೂರು ದಾಖಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್‌, ಅಲಯನ್ಸ್‌ ವಿವಿಯಲ್ಲಿ ಮಧುಕರ್‌ ಗಲಾಟೆ ಮಾಡಿದ್ದಾರೆ. ಬಲವಂತವಾಗಿ ವಿವಿಯ ಗೇಟ್‌ ತೆಗೆದು ಒಳನುಗ್ಗಿದ್ದಾರೆ.

5-6 ಜನರ ಜೊತೆ ಹೋಗಿ ಅಲಯನ್ಸ್‌ ವಿವಿ ನಮಗೆ ಸೇರಿದ್ದು ಎಂದು ಮಧುಕರ್‌ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಿ ರಿಜಿಸ್ಟ್ರಾರ್‌ ನಿವೇದಿತಾ ಜೈನ್‌ ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು. ಎಚ್ ಎಸ್ ಮುದ್ದೇಗೌಡರ ಪುತ್ರ- ಕಿರುತೆರೆ ಕಲಾವಿದ ಮಂಡ್ಯ ರವಿ ಪ್ರಸಾದ್ ಇನ್ನಿಲ್ಲ

ವಿಚಾರಣೆ ಬಳಿಕ
ಈ ದೂರಿನಲ್ಲಿ 40-50 ಜನ ಬೌನ್ಸರ್‌ ಇದ್ದರೆಂದು ತಿಳಿಸಿದ್ದಾರೆ. 4 ಶಸ್ತ್ರಾಸ್ತ್ರ ಇದ್ದವೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಧುಕರ್‌ ಅಂಗೂರ್‌ ಸೇರಿ 15 ಜನರನ್ನು ವಶಕ್ಕೆ ಪಡೆದಿದ್ದೇವೆ. ಕೂಲಂಕುಷವಾಗಿ ವಿಚಾರಣೆ ಬಳಿಕ ಸತ್ಯಾಂಶ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

Share This Article
Leave a comment