ವಿಜಯಪುರ ಪೋಟೋ ಜರ್ನಲಿಸ್ಟ್ (ವಿಜಯವಾಣಿ) ಸಂದೀಪ್ ಕುಲಕರ್ಣಿ ಅವರ ತಾಯಿ ಜಯಶ್ರೀ ಕುಲಕರ್ಣಿ ಅವರು ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಆಸ್ಪತ್ರೆ ಚಿಕಿತ್ಸೆ ಭಾಗವಾಗಿ 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.
ಕುಲಕರ್ಣಿ ಕುಟುಂಬ ಚಿಕಿತ್ಸೆಗಾಗಿ 4.75ಲಕ್ಷ ವೆಚ್ಚ ಮಾಡಿದ್ದಾರೆ. ಆರ್ಥಿಕ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಮಾಡಿದ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಪರಿಹಾರ ಮಂಜೂರು ಮಾಡಿದ್ದಾರೆ ಎಂದು ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.