ಮೇ 22 ರಿಂದ ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ: ಡಾ ಅಶ್ವತ್ಥ್ ನಾರಾಯಣ , ನಿರಾಣಿ ಸಾಥ್

Team Newsnap
1 Min Read

ಸಿಎಂ ಬಸವರಾಜ ಬೊಮ್ಮಾಯಿ 5 ದಿನಗಳ ದಾವೋಸ್ ಪ್ರವಾಸವನ್ನು ಫಿಕ್ಸ್ ಆಗಿದೆ . ಮೇ 22 ರಂದು ಬೆಳಗ್ಗೆ ಬೆಂಗಳೂರಿನಿಂದ ಹೊರಡಿಲಿರುವ ಬೊಮ್ಮಾಯಿ‌, ದಾವೋಸ್ ವಿಶ್ವ ಆರ್ಥಿಕ ಹೂಡಿಕೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬೊಮ್ಮಾಯಿ ಮಾತ್ರವಲ್ಲದೇ ನೆರೆಯ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕೂರ್ ಪುತ್ರ, ಸಚಿವ ಆದಿತ್ಯ ಠಾಕ್ರೆ ಸೇರಿದಂತೆ ತೆಲಂಗಾಣ ಸಿಎಂ ಪುತ್ರ, ಸಚಿವ ಕೆ.ಟಿ ರಾಮ ರಾವ್  ಅವರು ಕೂಡ ದಾವೋಸ್​ ಪ್ರವಾಸ ಕೈಗೊಳ್ಳಲಿದ್ದಾರೆ , ವಿಶ್ವ ಆರ್ಥಿಕ ಹೂಡಿಕೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನು ಓದಿ :ಭೀಕರ ಕಾರು ಅಪಘಾತ : ಆಸೀಸ್ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ದುರಂತ ಸಾವು

ಸಿಎಂ ಜೊತೆ ಸಚಿವರಾದ ಡಾ. ಅಶ್ವತ್ಥ ನಾರಾಯಣ ಮತ್ತು ಸಚಿವ ಮುರುಗೇಶ್ ನಿರಾಣಿ ಕೂಡ ದಾವೋಸ್ ಗೆ ಪ್ರಯಾಣ ಬೆಳೆಸಲಿದ್ದಾರೆ. 5 ದಿನಗಳ ದಾವೋಸ್ ಪ್ರವಾಸದ ಬಳಿಕ ಬಸವರಾಜ ಬೊಮ್ಮಾಯಿ ಮೇ 26 ರಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.

Share This Article
Leave a comment