ಕೊರೋನಾ ಸಂಕಷ್ಟ ಕ್ಕೆ 1250 ಕೋಟಿ ರು ಪ್ಯಾಕೇಜ್ ಘೋಷಿಸಿದ ಸಿಎಂ

Team Newsnap
1 Min Read

ಕೊರೊನಾ ಎರಡನೇ ಅಲೆಯ ಸಂಕಷ್ಟದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಬುಧವಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು.

ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿ ಸಿಎಂ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮಹತ್ವದ ನಿರ್ಧಾರ ವಿವರಿಸಿದರು.

1250 ಕೋಟಿ ರು ಪ್ಯಾಕೇಜ್ :

ಲಾಕ್ ಡೌನ್ ವೇಳೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಸರ್ಕಾರದ ಧ್ಯೇಯವಾಗಿತ್ತು.

ಸರ್ಕಾರ ಸಹಾಯ ಹಸ್ತ ನೀಡಲು ನಿರ್ಧರಿಸಿದೆ. 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸುತ್ತಿದ್ದೇವೆ ಎಂದರು.

ಪರಿಹಾರ ಘೋಷಣೆಯ ಮುಖ್ಯಾಂಶಗಳು :

  • 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಣೆ
  • ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪರಿಹಾರ ನೀಡುತ್ತಿದ್ದೇವೆ. 12.73 ಕೋಟಿ ಹಣವನ್ನು ಇದಕ್ಕೆ ಮೀಸಲಿಡಲಾಗಿದೆ.
  • ಹಣ್ಣು, ತರಕಾರಿ ಬೆಳೆಗಾರರಿಗೆ 10 ಸಾವಿರ ಪರಿಹಾರ ಘೋಷಣೆ. ಇದಕ್ಕೆ 70 ಕೋಟಿ ಮೀಸಲು.
  • ಅಟೋ, ಓಲಾ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ಪರಿಹಾರ
  • ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರು ಪರಿಹಾರ
  • ರಸ್ತೆ ಬದಿ ವ್ಯಾಪಾರಿಗಳಿಗೆ 2 ಸಾವಿರ ಪರಿಹಾರ.
  • ಸವಿತಾ ಸಮಾಜಕ್ಕೆ 2 ಸಾವಿರ, ಪರಿಹಾರ.
  • ಕಲಾವಿದರಿಗೆ 3 ಸಾವಿರ ಪರಿಹಾರ.
  • ರೈತರಿಗೆ ದೀರ್ಘಾವಧಿಯ ಸಾಲ 2021 ರ ಜುಲೈ 31 ರ ತನಕ ಮರುಪಾವತಿಗೆ ವಿಸ್ತರಣೆ. ಇದಕ್ಕೆ 135 ಕೋಟಿ ವೆಚ್ಚ.
  • ಬಿಪಿಎಲ್‌ ಕಾರ್ಡ್‌ದಾರರಿಗೆ 10 ಕೆಜಿ ಪಡಿತರ ವಿತರಣೆ
  • ಎಪಿಎಲ್‌ ಕಾರ್ಡ್‌ದಾರರಿಗೆ 15 ರೂ.ನಲ್ಲಿ ಅಕ್ಕಿ ವಿತರಣೆ
  • ಮೇ, ಜೂನ್ ತಿಂಗಳಲ್ಲಿ ಉಚಿತ ಪಡಿತರ ನೀಡಲು ತೀರ್ಮಾನ
Share This Article
Leave a comment