ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ತನ್ನ ಅಧೀನದಲ್ಲಿರುವ ಶಾಲಾ ಕಾಲೇಜುಗಳಲ್ಲಿ ಯಾವುದೇ ರೀತಿಯ ಶಾಲು, ಸ್ಕಾರ್ಪ್ ಹಾಗೂ ಹಿಜಾಬ್ ಧರಿಸದಂತೆ ಸುತ್ತೋಲೆ ಹೊರಡಿಸಿದೆ.
ಇಂದು ಮಧ್ಯಾಹ್ನ ತನ್ನ ಅಧೀನ ಶಾಲಾ ಕಾಲೇಜುಗಳಿಗೆ ಈ ಸುತ್ತೋಲೆ ನೀಡಿದೆ.
ಇಲಾಖೆಯು ಹಿಜಾಬ್, ಕೇಸರಿ ಶಾಲು, ಸ್ಕಾರ್ಪ್ ಧರಿಸದಂತೆ ಸೂಚಿಸಿದೆ.
ಜೊತೆಗೆ ಯಾವುದೇ ಧಾರ್ಮಿಕ ಬಾವುಟಗಳನ್ನು ಶಾಲಾ ಕಾಲೇಜುಗಳ ಆವರಣದಲ್ಲಿ ಬಳಸದಂತೆ ಸೂಚಿಸಿದೆ.
ಹೈಕೋರ್ಟ್ ಮಧ್ಯಂತರ ಆದೇಶ ಹಿನ್ನೆಲೆ ಇಲಾಖೆ ಸುತ್ತೋಲೆ ಹೊರಡಿಸಿದೆ.