ಮಂಡ್ಯದ ಮನ್ಮುಲ್ಗೆ ರಾಸಾಯನಿಕ ಮಿಶ್ರಿತ ಹಾಲು ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ತಾಲೂಕು ಕೆ.ಹೊನ್ನಲಗೆರೆ ಡೈರಿ ಕಾರ್ಯದರ್ಶಿ ಸೇರಿ ನಾಲ್ವರ ಬಂಧಿಸಲಾಗಿದೆ.
ರೈತರಿಂದ ಹಾಲು ಸಂಗ್ರಹಿಸಿದ ಹಾಲಿಗೆ ನೀರು ಹಾಕಿ ಕೊಬ್ಬಿನಾಂಶ ಹೆಚ್ಚಿಸಲು ಕೆಮಿಕಲ್ ಅನ್ನು ದುಷ್ಕರ್ಮಿಗಳು ಮಿಶ್ರಣ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕೆ.ಹೊನ್ನಲಗೆರೆ ಡೈರಿಯಿಂದ ದಿನಕ್ಕೆ ಮನ್ಮುಲ್ ಗೆ 35 ಕ್ಯಾನ್ಗಳಲ್ಲಿ ಸಾವಿರಾರು ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಜ.8 ಮತ್ತು 13 ರಂದು ಪರೀಕ್ಷೆ ವೇಳೆ ಹಾಲಿಗೆ ರಾಸಾಯನಿಕ ಮಿಶ್ರಣವಾಗಿರುವುದು ಪತ್ತೆಯಾಗಿದೆ.
ಹಗರಣ ಬಯಲಿಗೆಳೆದಿದ್ದ ಮನ್ಮುಲ್ ಅಧಿಕಾರಿಗಳು :
ಅಕ್ರಮವಾಗಿ ಹಣ ಸಂಪಾದನೆ ಅಡ್ಡ ದಾರಿ ಹಿಡಿದ ದುಷ್ಕರ್ಮಿಗಳು ಹಾಲಿಗೆ
ಮಾಲ್ಟೋ ಡೆಕ್ಸ್ಟಿನ್ ಎಂಬ ರಾಸಾಯನಿಕ ಮಿಶ್ರಣ ಮಾಡುತ್ತಿದ್ದರು.
ಕೊಬ್ಬಿನಾಂಶ ಹೆಚ್ಚಿಸಲು ಹಾಲಿಗೆ ಕೆಮಿಕಲ್ ಮಿಕ್ಸಿಂಗ್ ಮಾಡುತ್ತಿರುವ ಬಗ್ಗೆ ಮನ್ ಮುಲ್ ಆಡಳಿತ ಮಂಡಳಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.
ಪ್ರಕರಣ ಸಂಬಂಧ ಕೆ.ಹೊನ್ನಲಗೆರೆ ಡೈರಿ ಕಾರ್ಯದರ್ಶಿ ಅಂಕರಾಜು, ಟೆಸ್ಟರ್ ಸೇರಿ ನಾಲ್ವರ ಬಂಧನ ಮಾಡಲಾಗಿದೆ
70 ಹಸುಗಳನ್ನು ಸಾಕಿ ತಾನೇ ಹಾಲು ಸರಬರಾಜು ಮಾಡ್ತಿದ್ದ ಅಂಕರಾಜು ಕೊಬ್ಬಿನಾಂಶ ಹೆಚ್ಚಿಸಲು ಹಾಲಿಗೆ ರಾಸಾಯನಿಕ ಮಿಶ್ರಣ ಮಾಡುತ್ತಿದ್ದ. ಅಕ್ರಮ ಹಣ ಸಂಪಾದನೆಗೆ ಅಮೃತಕ್ಕೆ ವಿಷ ಬೆರೆಸುತ್ತಿದ್ದ ದುಷ್ಕರ್ಮಿಗಳು.
- PSI ನೇಮಕಾತಿ ಅಕ್ರಮ : ಶಾಂತ- ರವೀಂದ್ರ ಎಸ್ಕೇಪ್ – ಸಿಡಿಐಗೆ ಇವರನ್ನು ಪತ್ತೆ ಮಾಡುವುದೇ ಸವಾಲು
- ಶಾಸಕ ಜಿ ಟಿ ಡಿಯನ್ನು ಪಕ್ಷದಲ್ಲಿ ಉಳಿಸುತ್ತೇನೆ : 2 ಕಂಡಿಷನ್ ಗೆ ಒಪ್ಪುತ್ತೀರಾ – ಸಿ ಎಸ್ ಪುಟ್ಟರಾಜು
- ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು
- ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್ ನ ಒಂದೇ ಕುಟುಂಬದ 7 ಜನ ದುರಂತ ಸಾವು
- IPL ಪಂದ್ಯದ ಸಮಾರೋಪದಲ್ಲಿ ಮಂಡ್ಯ – ಶಿವಮೊಗ್ಗ ಕಲಾವಿದರಿಂದ ಪೂಜಾ ಕುಣಿತ, ಡೊಳ್ಳು ಕುಣಿತ
More Stories
ಶಾಸಕ ಜಿ ಟಿ ಡಿಯನ್ನು ಪಕ್ಷದಲ್ಲಿ ಉಳಿಸುತ್ತೇನೆ : 2 ಕಂಡಿಷನ್ ಗೆ ಒಪ್ಪುತ್ತೀರಾ – ಸಿ ಎಸ್ ಪುಟ್ಟರಾಜು
ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್
ಜನಸಾಮಾನ್ಯರಿಗೆ ಕಾನೂನು ಅರಿವು ಅತ್ಯಗತ್ಯ: ನ್ಯಾ. ವೀರಪ್ಪ