8 ಅಂಶಗಳ ಆರ್ಥಿಕ ನೆರವು, ಪರಿಹಾರಗಳನ್ನು ಘೋಷಿಸಿದ ಕೇಂದ್ರ ಸರ್ಕಾರ

Newsnap Team
1 Min Read
No need to pay income tax up to Rs 7.27 lakh: Union Finance Minister Nirmala 7.27 ಲಕ್ಷ ರು ತನಕ ಆದಾಯ ತೆರಿಗೆ ಪಾವತಿ ಅಗತ್ಯವಿಲ್ಲ

ಕೊರೊನಾ ಸೋಂಕಿನ ಹಿನ್ನೆಲೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಸೋಮವಾರ ಕೆಲವು ನೆರವು ಪರಿಹಾರಗಳನ್ನು ಪ್ರಕಟಿಸಿದೆ.

ಈ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್
ಈ ಹಿಂದೆಯೂ ಕೆಲವು ನೆರವು ಪರಿಹಾರಗಳನ್ನ ಘೋಷಿಸಲಾಗಿತ್ತು. ಇಂದು ಮತ್ತಷ್ಟು ಆರ್ಥಿಕ ಪರಿಹಾರಗಳನ್ನು ಘೋಷಿಸಲಾಗುತ್ತಿದೆ ಎಂದರು.

8 ಅಂಶಗಳ ಆರ್ಥಿಕ ನೆರವು ಪರಿಹಾರಗಳನ್ನು ಘೋಷಣೆ :
  • ಕೋವಿಡ್​​ನಿಂದ ಸಂಕಷ್ಟಕ್ಕೆ ಸಿಲುಕಿದ ವಲಯಗಳಿಗೆ ಹೆಚ್ಚುವರಿ 1.1 ಲಕ್ಷ ಕೋಟಿ ರು ಸಾಲ
  • ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರು ಹಾಗೂ ಇತರೆ ವಲಯಗಳಿಗೆ 60,000 ಕೋಟಿ ರು
  • ಆತ್ಮನಿರ್ಭರ ಭಾರತ್ ಪ್ಯಾಕೇಜ್​​ನ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್​​ನಲ್ಲಿ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರು.‌
  • ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಸಣ್ಣ ಸಾಲಗಾರರಿಗೆ ಸಾಲ ನೀಡಲು ಕ್ರೆಡಿಟ್ ಗ್ಯಾರಂಟಿ ಯೋಜನೆ ಪ್ರಾರಂಭ.
  • 1.25 ಲಕ್ಷ ಸಾಲ ಪಡೆಯಬಹುದು, ಆರ್​ಬಿಐಗಿಂತ 2 ಪರ್ಸೆಂಟ್ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಸಾಲದ ಅವಧಿ 3 ವರ್ಷ
  • ವಾಸೋದ್ಯಮ ಕ್ಷೇತ್ರಕ್ಕೆ ಹೊಸ ಯೋಜನೆ- 11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು, ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ (ಟಿಟಿಎಸ್) ಆರ್ಥಿಕ ಸಹಾಯ ವಿಸ್ತರಣೆ
  • ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ 10 ಲಕ್ಷದವರೆಗೆ ಸಾಲ
  • ಲೈಸೆನ್ಸ್ ಹೊಂದಿರುವ ಟೂರಿಸ್ಟ್ ಗೈಡ್​​ಗಳಿಗೆ 1 ಲಕ್ಷದವರೆಗೆ ಸಾಲ
  • ಪ್ರವಾಸಿ ವೀಸಾ ವಿತರಣೆಯನ್ನು ಪುನರಾರಂಭಿಸಿದ ನಂತರ ಮೊದಲ 5 ಲಕ್ಷ ಪ್ರವಾಸಿ ವೀಸಾಗಳು ಸಂಪೂರ್ಣ ಉಚಿತ
  • ಆತ್ಮನಿರ್ಭರ ಭಾರತ್ ರೋಜ್​ಗಾರ್ ಯೋಜನೆ ಅವಧಿ ವಿಸ್ತರಣೆ
  • ರೈತರಿಗೆ ಹೆಚ್ಚುವರಿ ಪ್ರೋಟೀನ್ ಆಧಾರಿತ ರಸಗೊಬ್ಬರ ಸಹಾಯಧನ- 15,000 ಕೋಟಿರು.
  • ಪ್ರಧಾನಮಂತ್ರಿ ಆತ್ಮನಿರ್ಭರ ಗರೀಭ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ- ಮೇ ತಿಂಗಳಿಂದ ನವೆಂಬರ್ 2021 ರವರೆಗೆ
Share This Article
Leave a comment