ಕತ್ತರಿಗುಪ್ಪೆಯ ಇಟ್ಟಮಡು ಬಳಿ ಭೀಕರ ಸರಣಿ ಅಪಘಾತಕ್ಕೆ ಕಾರಣವಾಗಿದ್ದ(KA -51 -MK 5416) ಕಾರಿನ ಚಾಲಕ ಕಿರುತೆರೆಯ ಸಹ ನಿರ್ದೇಶಕ ಮುಕೇಶ್ ಎಂಬಾತನನ್ನು ಬಂಧಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಮುಕೇಶ್ ಇಟ್ಟಮಡು ಬಳಿ ಮೂವರು ಪಾದಚಾರಿ, ಒಂದು ಕಾರು ಹಾಗೂ ಬೈಕ್ಗೆ ಆ್ಯಕ್ಸಿಡೆಂಟ್ ಮಾಡಿದ್ದ. ಪರಿಣಾಮ ಪಾದಚಾರಿ ಸುರೇಶ್ ಸಾವನ್ನಪ್ಪಿದ್ದಾರೆ .
ಕಾರು ಚಾಲಕ ಮುಕೇಶ್ ಎಂಬಾತನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯೇ ಇದಕ್ಕೆ ಕಾರಣ ಎಂದಿದ್ದಾರೆ. ಅಲ್ಲದೇ ಕಾರು ಚಾಲಕ ಮುಕೇಶ್ ಕಿರುತೆರೆಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ಬೆಳಗ್ಗೆ ಶೂಟಿಂಗ್ ಮುಗಿಸಿಕೊಂಡು ಬರುವಾಗ ಘಟನೆ ನಡೆದಿದೆ.
ಪ್ರಕರಣ ದಾಖಲಿಸಿಕೊಂಡು ಚಾಲಕ ಮುಕೇಶನನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.