Karnataka

ಕರುನಾಡ ಜಿಲ್ಲೆಗಳ ಕಿರು ಪರಿಚಯ – 18 – ಚಿತ್ರದುರ್ಗ

ಕಲಾವತಿ ಪ್ರಕಾಶ್
ಬೆಂಗಳೂರು

ಶ್ರೀಕೃಷ್ಣ ಜಾಂಬುವತಿಯರ ಮಗ ಚಿತ್ರಕೇತುವಾಳಿದ
ಈ ಊರಿಗೆ ಚಿತ್ರದುರ್ಗವೆಂಬ ಹೆಸರಾಗಿದೆ
ಎಂಬುದಾಗಿ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ
ಚಿಂತನಕಲ್ಲು ಚಿತ್ರಕಲ್ಲುದುರ್ಗ ಪದಗಳಿಂದ ಬಂತೆಂದಿದೆ

ಹಿರಿಯೂರು ಹೊಳಲ್ಕೆರೆ ಹಾಗೂ ಚಿತ್ರದುರ್ಗ
ಮೊಳಕಾಲ್ಮೂರು ಚಳ್ಳಕೆರೆ ಮತ್ತು ಹೊಸದುರ್ಗ
ಎಂಬ ಆರು ತಾಲ್ಲೂಕುಗಳು ಈ ಜಿಲ್ಲೆಯಲ್ಲಿವೆ
ಭರಮಸಾಗರ ಭೀಮಸಾಗರ ವಾಣಿವಿಲಾಸ ಜಲಾಶಯಗಳಿವೆ

ಮೌರ್ಯರು ಹಾಗೂ ವಿಜಯನಗರದ ಅರಸರು
ಮೊಘಲರು ಪಳಯಗಾರರು ಇಲ್ಲಿ ಆಳಿದರು
ಶೌರ್ಯ ಪರಾಕ್ರಮಕ್ಕೆ ಹೆಸರಾಗಿದ್ದರೀ ನಾಯಕರು
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರು

ಏಳು ಸುತ್ತಿನ ಕೋಟೆ ಚಿತ್ರದುರ್ಗದ ಕೋಟೆಯನ್ನು
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸಿರುವ ಲೇಖಕ
ಗಿರಿದುರ್ಗ ಜಲದುರ್ಗ ವನದುರ್ಗವೆಂಬ
ಎಲ್ಲಾ ಲಕ್ಷಣಗಳನ್ನೊಳಗೊಂಡ ವಿಸ್ಮಯಕಾರಿ ಸ್ಮಾರಕ

ಹತ್ತೊಂಬತ್ತು ಅಗಸೆ ಬಾಗಿಲು ೩೮ ದಿಡ್ಡಿ ಬಾಗಿಲು
ಮೂವತ್ತೈದು ಕಳ್ಳ ಕಿಂಡಿ ನಾಲ್ಕು ಗುಪ್ತ ದ್ವಾರಗಳು
ಏಕನಾಥೇಶ್ವರ ಹಿಡಂಬೇಶ್ವರ ಮುಂತಾವುಗಳು
ಬೆಟ್ಟದ ಮೇಲಿರುವ ಪುರಾತನ ದೇವಾಲಯಗಳು

ಮದ್ದು ಬೀಸುವ ಕಲ್ಲು ಒನಕೆ ಕಿಂಡಿ ಎಣ್ಣೆ ಕೊಳಗಳು
ಮದ್ದಿನ ಮನೆಗಳು ಗರಡಿ ಮನೆಗಳು ಕಣಜಗಳು
ಪಹರೆ ಗೃಹಗಳು ಬಂದೂಕು ಕಿಂಡಿಗಳು ಕಣಿವೆಗಳು
ಬುರುಜು ಬತೇರಿಗಳು ವೀಕ್ಷಣ ಗೋಪುರಗಳು

ಸೈನಿಕ ಗೃಹಗಳು ಕೋಟೆಯಲ ನೂರಾರು ಸ್ಮಾರಕಗಳು
ಕೋಟೆ ನೋಡಲು ಬಹು ಸುಂದರ ಕಾದಾಡಲು ಭಯಂಕರ
ಎಂಬ ಮಾತು ಜನಮನದಲ್ಲಿರುವ ಗಾದೆ ಜನಜನಿತ
ಗಂಡು ಮೆಟ್ಟಿದ ನಾಡೆಂಬ ಹೆಸರನ್ನೂ ಪಡೆದಿಹುದು

ಏಳು ಸುತ್ತಿನ ಕೋಟೆ ಚಂದವಳ್ಳಿ ತೋಟ ಗವಿರಂಗಾ
ನಾಯಕನ ಹಟ್ಟಿ ಹಾಲು ರಾಮೇಶ್ವರ ಮಾರಿ ಕಣಿವೆ
ದೊಡ್ಡಘಟ್ಟ ತುರುವನೂರು ಮುರುಘಾ ಮಠ
ಇಲ್ಲಿಯ ನೋಡುವ ಪ್ರಮುಖ ಪ್ರವಾಸಿ ತಾಣಗಳು

ಕಾದಂಬರಿಕಾರ ತ ರಾ ಸುಬ್ಬರಾವ್ ಸೀತಾರಾಮ ಶಾಸ್ತ್ರಿಗಳು
ಬೆಳಗೆರೆ ಜಾನಕಮ್ಮ ಬೆಳಗೆರೆ ಚಂದ್ರಶೆಖರ ಶಾಸ್ತ್ರಿಗಳು
ಅನಸೂಯ ರಾಮರೆಡ್ಡಿ ಬಿ ಎಲ್ ವೇಣುರವರು
ಈ ಜಿಲ್ಲೆಯ ಸಾಹಿತಿಗಳೆಲ್ಲಿವರು ಪ್ರಮುಖರು

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024