ಕಲಾವತಿ ಪ್ರಕಾಶ್.
ಬೆಂಗಳೂರು.
ಕನ್ನಡ ನಾಡಿನ ಹೆಮ್ಮೆಯ ಶರಣ
ಬಸವಣ್ಣ ಹುಟ್ಟಿದ ಜಿಲ್ಲೆಯಿದು
ಜಗದೊಳಗಿರುವ ಏಳು ಅದ್ಭುತದೊಳು
ಗೋಳಗುಮ್ಮಟವೂ ಒಂದಹುದು
ಕರ್ನಾಟಕದ ಗೊಮ್ಮಟ ನಗರ
ಇದುವೇ ನಮ್ಮ ವಿಜಯಪುರ
ದೆಹಲಿ ಸುಲ್ತಾನರ ಬಹಮನಿ ರಾಜರ
ನಿಜಾಮರಾಳ್ವಿಕೆಗೊಳಪಟ್ಟ ಪುರ
ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪಗಳ
ಶಿಲ್ಪ ಕಲೆಗಳ ತವರೂರು
ಇತಿಹಾಸದಲ್ಲೇ ಎಂಥ ಶತೃವೂ
ಈ ಕೋಟೆಯ ಭೇದಿಸಿರಲಾರರು
ಭಾರತದತಿ ದೊಡ್ಡ ಗೊಮ್ಮಟವು
ಜಗದೊಳೆರಡನೆ ಸ್ಥಾನ ಪಡೆದಿದೆ
ಯಾವ ಕಂಬದ ಆಧಾರವಿಲ್ಲದೆ
ಗೋಡೆಯ ಮೇಲೇ ನಿಂತಿದೆ
ಗೊಮ್ಮಟದೊಳಗೆ ಆಡಿದ ಮಾತು
ಏಳು ಬಾರಿ ಪ್ರತಿಧ್ವನಿಸುವುದು
ಗೋಡೆಯ ಬಳಿ ಪಿಸಿಗುಟ್ಟಿದ ಮಾತು
ಮತ್ತೊಂದು ಬದಿಯಲಿ ಕೇಳುವುದು
ಇಬ್ರಾಹಿಮ್ ರೋಜಾ ಜುಮ್ಮಾ ಮಸೀದಿ
ಬಾರಾ ಕಮಾನು ಇಲ್ಲಿಹವು
ಉಪ್ಲಿ ಬುರ್ಜಾ ತಾಜ್ ಬಾವಡಿ
ವಿಶೇಷತೆಯನು ಮೆರೆದಿಹವು
ಶಿವಗಿರಿ ಶಿವನ ದೊಡ್ಡ ಪ್ರತಿಮೆಯ
ಧಾರ್ಮಿಕ ನೆಲೆಯೂ ಈ ನಾಡು
ಸಿದ್ದೇಶ್ವರರ ಅಕ್ಕ ನಾಗಮ್ಮನ
ಗುಹಾಂತರ ದೇವಾಲಯ ಈ ಬೀಡು
ಫ.ಗು ಹಳಕಟ್ಟಿ ಸಂಗ್ರಹಿಸಿರುವ
ವಚನಕಾರರು ೨೫೦ಕ್ಕೂ ಹೆಚ್ಚಿಹರು
ಜಾನಪದ ಸಾಹಿತ್ಯಕೆ ಕೊಡುಗೆ ನಿಡಿದ
ಮಧುರ ಚನ್ನರದೂ ಈ ಊರು.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment