2017 ಮೇ ನಲ್ಲಿ ಸಂಘವೊಂದರ ನೊಂದಣಿ ಮಾಡಲು ಸಹಕಾರ ಅಭಿವೃದ್ದಿ ಅಧಿಕಾರಿಯೊಬ್ಬರು 7500 ರು ಲಂಚ ಸ್ವೀಕಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆ ಅಧಿಕಾರಿಗೆ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ
ಇದನ್ನು ಓದಿ – ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಮತದಾನದ ವಿವರ
20ನೇ ಬೆಂಗಳೂರು ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ(ವಿಶೇಷ. ನ್ಯಾಯಾಧೀಶರು ಭ್ರಷ್ಟಾಚಾರ ನಿಗ್ರಹ ಕಾಯ್ದೆ) ನ್ಯಾಯಾಧೀಶ ಕೆ ಲಕ್ಷ್ಮೀ ನಾರಾಯಣ ಭಟ್ ವಿಚಾರಣೆ ನಡೆಸಿ, ಆರೋಪಿ ಅಧಿಕಾರಿ ಎಚ್ ಪಿ ಸದಾಶಿವ ವಿರುದ್ದ ಈ ತೀರ್ಪು ನೀಡಿದ್ದಾರೆ
ಪ್ರಕರಣದ ವಿವರ :
ಬೆಂಗಳೂರಿನ ನಗರದ ಯಲಹಂಕ ನಿವಾಸಿಯೊಬ್ಬರು. ತಮ್ಮ ಸ್ನೇಹಿತನ ಮುಖಾಂತರ ಕೋರಮಂಗಲದ ಧನುಷ್ಶ್ರೀ ಅಪಾರ್ಟಮೆಂಟ್ ಓನರ್ಸ್ ಅಸೋಸಿಯೇಷನ್ಸ್ ಹೆಸರಿನಲ್ಲಿ ಸಂಘವನ್ನು ತೆರೆಯಲು ನೋಂದಣಿ ಮಾಡುವ ಸಲುವಾಗಿ ಚಾಮರಾಜ ಪೇಟೆಯಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರು.
ಆರೋಪಿತ ಸರ್ಕಾರಿ ಅಧಿಕಾರಿಹೆಚ್. ಪಿ. ಸದಾಶಿವ. ಸಂಘವನ್ನು ನೋಂದಣಿ ಮಾಡಿಕೊಡುವ ಸಲುವಾಗಿ ಪಿರ್ಯಾದುದಾರರಿಗೆ 10,000 ರು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟರು.
ಈ ಕುರಿತಂತೆ ಬೆ೦ಗಳೂರು ನಗರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿರುವ ದೂರು ನೀಡಿದ ನಂತರ ಲಂಚದ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು
- ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ
- ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ
- ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ
- ಪ್ರಜ್ವಲ್ ವಿರುದ್ಧ ಮೂರನೇ ಎಫ್ ಐ ಆರ್ ದಾಖಲಿಸಲು ಎಸ್ ಐಟಿ ಸಿದ್ದತೆ