“ನೆರ್ಕೆಗೋಡೆಯ ರತ್ನಪಕ್ಷಿ” ಬಿಡುಗಡೆ

Team Newsnap
1 Min Read

ಹಸ್ತಪ್ರತಿಗಾಗಿ ರಾಜ್ಯಮಟ್ಟದ “2019 ನೇ ಸಾಲಿನ ಕವಿ ಗವಿಸಿದ್ದ ಎನ್.ಬಳ್ಳಾರಿ ಕಾವ್ಯಪುರಸ್ಕಾರ” ಪಡೆದಿರುವ ಪತ್ರಕರ್ತ , ಕವಿ ಎನ್. ರವಿಕುಮಾರ್ ಟೆಲೆಕ್ಸ್ ಅವರ “ನೆರ್ಕೆಗೋಡೆಯ ರತ್ನಪಕ್ಷಿ” ಕವನ ಸಂಕಲನವು ಡಿ. 19 ರಂದು ಕೊಪ್ಪಳದ ಗವಿಸಿದ್ದ ಎನ್.ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಬಿಡುಗಡೆಗೊಳ್ಳಲಿದೆ.

7aa22eaa 04f7 46dd 93e3 d952ad7d66aa

ಖ್ಯಾತ ಹಿರಿಯ ಸಾಹಿತಿ ಡಾ. ಅಲ್ಲಮಪ್ರಭು ಬೆಟ್ಟದೂರು ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಲಿದ್ದು, ಖ್ಯಾತ ವಿಮರ್ಶಕರು, ಸಂಶೋಧಕರೂ ಆದ ಡಾ. ಜಾಜಿ ದೇವೇಂದ್ರಪ್ಪ, ಕತೆಗಾರ ಡಾ. ಅಮರೇಶ್ ನುಗಡೋಣಿ ಅವರು ಉಪಸ್ಥಿತರಿರುವರು.

ನೆರ್ಕೆಗೋಡೆಯ ರತ್ನಪಕ್ಷಿ ಎನ್. ರವಿಕುಮಾರ್ ಅವರ ಎರಡನೆ ಕವನ ಸಂಕಲನವಾಗಿದೆ. 2018 ರಲ್ಲಿ ಬಿಡುಗಡೆ ಕೊಂಡ “ನಂಜಿಲ್ಲದ ಪದಗಳು” ಚೊಚ್ಚಲ ಕವನ ಸಂಕಲನವೂ ರಾಜ್ಯಮಟ್ಟದ ನಾಲ್ಕು ಪ್ರಶಸ್ತಿಗಳನ್ನು ಪಡೆದಿತ್ತು.

Share This Article
Leave a comment