ಚಿತ್ತದ ಸುತ್ತ ಸುಳಿಯುತ್ತಿರುವ ಸಣ್ಣ
ಚಿಟ್ಟೆಯನ್ನ ನಿರ್ಲಕ್ಷಿಸಿ. ಪಾಪ ಎಂದು
ಮೈ-ಮರೆತೊಡೆ. ಸಣ್ಣ-ಕೀಟವೇ
ಸೊಳ್ಳೆಯಾಗಿ ಮನುಜನ ಬೆವರವಾಸನೆ
ಗ್ರಹಿಸಿ ಕಣ್ಣಿಗೆ ಕಾಣಿಸದಂತೆ..
ನೋವು ಅರಿವಿಗೆ ಬಾರದಂತೆ..
ನೆತ್ತರು ಹೀರವ ಕೀಟ..
ಗೂಡು-ಕಟ್ಟುವ ಗೋಜಿಗವಿಲ್ಲ
ಗಿಡ-ಮರಗಳಡೆಲೆವ ಪರಿಪಾಟಲಿಲ್ಲ.
ಸಂದಿ-ಗೊಂದಿಗಳಲಿ..
ತಗ್ಗು ಕೊಳಚೆಗಳಲಿ..
ನಿಂತ ತಿಳಿನೀರ ಕುಣಿಗಳಲಿ. ನೀರ
ಮೇಲಣ. ನೀರೊಳ. ಗಾಳಿಯೊಳ
ನಾಲಕ್ಕು ಹಂತದ ಜೀವನ ಚಕ್ರದಿ
ಸಂತಾನೋತ್ಪತ್ತಿಯ ಉತ್ತಾನ..
ತಿಳಿನೀರ ಮೇಲಣ ಬೆಳ್ಳಿ ಮೊಟ್ಟೆಗಳ
ಖಣಜ ಸ್ಕಲಿಸಿ ಕಪ್ಪಾಗಿ ದಿನ ಕಳೆಯಲು
ಮಿಟುಕು ಹುಳವಾಗಿ ಸಣ್ಣ ರೆಕ್ಕೆಗಳ
ಕೀಟವಾಗಿ ರೆಕ್ಕೆಗಳುದುರಿ ನೆತ್ತರು
ಹೀರುವ ಪರವಾಲಂಬಿ ರಕ್ತ-ಭಕ್ಷಾಸುರ.
ಸೊಳ್ಳೆಗಳ ನಿಗ್ರಹಿಸಲು ಹೊಗೆಯ
ಬುಗ್ಗೆಗೆ ಮೊರೆ-ಹೋಗುವ ಮನುಜ
ಕಾರ್ಬನ್ ಯುಕ್ತ ಹೊಗೆಯ ನಿಗ್ರಾಣಿಸಿ
ಶ್ವಾಸಕೋಶ ಸಂಬಂಧಿತ ದುಗುಡವ
ಭರಿಸುವ ಮನುಜ..
….✍️ ಸುರೇಶ ಫ ಮಲ್ಲಾಡದ..
ರಟ್ಟೀಹಳ್ಳಿ/ಸರ್ವಜ್ಞನ-ಮಾಸೂರು.
ಹಾವೇರಿ..
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ