ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದ ಕಲಂ 370 ರದ್ದಾದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಇಂದು ಪ್ರವಾಸ ಆರಂಭಿಸಿದ ಬೆನ್ನಲ್ಲೇ ಪ್ರಧಾನಿ ರ್ಯಾಲಿ ಸ್ಥಳದಿಂದ 12KM ದೂರದಲ್ಲಿರುವ ಲೀಯಾನ ಗ್ರಾಮದಲ್ಲಿ ಸ್ಫೋಟವೊಂದು ಸಂಭವಿಸಿದೆ.
ಈ ಸ್ಫೋಟದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ . ಸೇನಾ ಬಿಗಿ ಬಂದೋಬಸ್ತಿನ ನಡುವೆಯೂ ಈ ಘಟನೆ ಸಂಭವಿಸಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.
ರಾಷ್ಟ್ರೀಯ ಪಂಚಾಯತ್ ದಿನವದ ಇಂದು ಪ್ರಧಾನಿ ಮೋದಿ ಜಮ್ಮುವಿನ ಸಂಬ ಜಿಲ್ಲೆಯ ಪಲ್ಲಿ ಪಂಚಾಯತ್ ನಿಂದ ಜಲ ನಿರ್ವಹಣೆ ಕುರಿತ ಸಮಾವೇಶವೊಂದನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬನಿಹಾಲ್. -ಖಾಜಿಗುಂಡ್ ಮಧ್ಯೆ ಸರ್ವ ಋತುಗಳಲ್ಲಿ ಸಂಪರ್ಕ ಕಲ್ಪಿಸುವ ಸುರಂಗದ ಲೋಕಾರ್ಪಣೆ ಸೇರಿ 20 ಸಾವಿರ ಕೋಟಿ ರುಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.