ಭರತನಾಳಿದ ಈ ನಾಡು ಭಾರತಾಂಬೆಯ ಮಡಿಲಾಯಿತು ನೋಡಿ ಅವಳ ಬಂಧನದ ಪರ್ವ ಮೊದಲಾಯಿತು
ಭೂಮಿ ವಸುಂಧರೆಯಾದಳು ನೋಡಿ
ಅವಳ ಬಂಗಾರದೊಡಲ ಬಗೆದು,
ಬರಿದು ಮಾಡಲಾಯಿತು
ಜನನಿ ಜನ್ಮ ಭೂಮಿ
ಸ್ವರ್ಗ ಸಮಾನವೆಂದರು ನೋಡಿ
ಗಡಿಯ ಗೆರೆಯೆಳೆದು ವೈಷಮ್ಯದ
ಬೆಂಕಿ ಹಚ್ಚಲಾಯಿತು
ಕಾಡು ಗಿಡಗಂಟೆಗಳ ನಡುವೆ
ಕೋಗಿಲೆಯ ಉಲಿ ಪಲ್ಲವಿಸುವುದನು
ವನದೇವತೆ ಎಂದರು ನೋಡಿ
ಹುಡುಕಿ ಹುಡುಕಿ ಬುಡಕ್ಕೆ ಕೊಡಲಿ ಹಾಕಿ
ಹಸಿರ ನೆತ್ತರ ಹರಿಸುವಂತಾಯಿತು
ಅದೆಲ್ಲೋ ಹಿಮರಾಶಿಯ ನೆತ್ತಿಯಲಿ
ಭೂಮ್ಯಾ0ತರಾಳದಲಿ ನರ್ತನಗೈಯುತ್ತಿದ್ದ
ಜಲರಾಶಿಗೆ ಗಂಗಾ ಮಾತೆ
ಪುಣ್ಯಪ್ರದಾತೆ ಎಂದರು ನೋಡಿ
ಶವವ ಎಸೆದೆಸೆದು ವಿಷವ ಬೆರಸಿ
ಪರಮ ಮಾಲಿನ್ಯಗೊಳಿಸಲಾಯಿತು
ಹೆಣ್ಣು ಕ್ಷಮಯಾಧರಿತ್ರಿ ಎಂದಾಗಲೇ
ಕಂಬನಿಯ ಕರಗಿಸಿ
ಎಗ್ಗಿಲ್ಲದ ನೋವ ಅವುಡುಗಚ್ಚಿ
ಬಚ್ಚಿಡುವಂತಾಯಿತು
ಇದೆಂತಹ ನಂಟು
ಹೆಣ್ಣಿಗೂ ನೋವಿಗೂ?
ಪುಣ್ಯದ ಎಳೆಎಳೆಗೂ
ಪ್ರೀತಿಯ ಕಣಕಣಕ್ಕೂ
ಅಭಿಮಾನದ ಹೊಳೆಹೊಳೆಗೂ
ಹೆಣ್ಣರೂಪ ನೀಡಿದರು ನೋಡಿ
ಅವಳಿಗೂ ನೋವಿಗೂ ಆಗಲೇ
ಅವಿನಾಭಾವ ನಂಟು ಸೃಷ್ಟಿಯಾಯಿತು.
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More
This website uses cookies.
Leave a Comment