ಸಂದರ್ಶನ ನೀಡಲಿಲ್ಲ ಎಂಬ ಕಾರಣಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಗೆ ಬೆದರಿಕೆ ಹಾಕಿದ್ದ ಪತ್ರಕರ್ತ ಬೋರಿಯಾ ಮಜುಂದಾರ್ ನನ್ನು ಬಿಸಿಸಿಐ (BCCI) ಎರಡು ವರ್ಷಗಳ ಕಾಲ ಬ್ಯಾನ್ ಮಾಡಿದೆ.
ಪತ್ರಕರ್ತಬೋರಿಯಾ ಮಜುಂದಾರ್ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಕ್ರಿಕೆಟ್ ಸ್ಟೇಡಿಯಂ ಒಳಗೆ ಬಿಟ್ಟುಕೊಳ್ಳದಂತೆ ಬಿಸಿಸಿಐ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ತವರಿನಲ್ಲಿ ನಡೆಯುವ ಪಂದ್ಯಗಳಿಗೂ ಅವರಿಗೆ ಮಾನ್ಯತೆ ನೀಡಲಾಗುವುದಿಲ್ಲ. ಜೊತೆಗೆ ಅವರನ್ನ ಕಪ್ಪು ಪಟ್ಟಿಗೂ ಸೇರಿಸಲು ಪತ್ರ ಬರೆಯುತ್ತೇವೆ. ಹಾಗೆಯೇ ಆಟಗಾರರು ಆತನೊಂದಿಗೆ ಸಂಪರ್ಕ ಬೆಸೆಯಬಾರದು ಎಂದು ಹೇಳಿದೆ.
ಸಾಹನನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲು ಸಾಧ್ಯವಿಲ್ಲ. ನಿವೃತ್ತಿ ಪಡೆಯುವುದು ಉತ್ತಮ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದ ವಿಚಾರವಾಗಿ ವೃದ್ಧಿಮಾನ್ ಸಾಹ ಆಕ್ರೋಶ ವ್ಯಕ್ತಪಡಿಸಿದ್ರು.
ದ್ರಾವಿಡ್ ಮೇಲೆ ಕಿಡಿಕಾರಿದ ಬೆನ್ನಲ್ಲೇ ಪತ್ರಕರ್ತ ಬೋರಿಯಾ ಮಜುಂದಾರ್, ಸಾಹಗೆ ವಾಟ್ಸಪ್ ಮೂಲಕ ಸಂದರ್ಶನ ನೀಡುವಂತೆ ಸಂದೇಶ ಕಳುಹಿಸಿದರು ಸಾಹ ಇದಕ್ಕೆ ಒಪ್ಪದ ಕಾರಣ, ಪತ್ರಕರ್ತ ಬೆದರಿಕೆ ಹಾಕಿದರು.