ಬಸವಣ್ಣರ ಕಳಬೇಡ, ಕೊಲಬೇಡ ವಚನ ಜೀವನದ ಸಂವಿಧಾನ: ಡಾ. ಸೋಮಶೇಖರ್

Team Newsnap
1 Min Read

ಬಸವಣ್ಣನವರ ಕಳಬೇಡ, ಕೊಲಬೇಡ ವಚನವು ಜೀವನದ ಸಂವಿಧಾನವಾಗಿದೆ. ಇದು ಎಲ್ಲಾ ಧರ್ಮಗಳೂ ಅಂಗೀಕರಿಸಬೇಕಾದ ಸಪ್ತಸೂತ್ರ ಎಂದು ಗಡಿಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ “ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ’ ಹಾಗೂ “ನಡೆದಾಡಿದ ದೇವರು’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಆಫ್ಘಾನಿಸ್ತಾನದಲ್ಲಿ ಈಗ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ವಚನ ಹೆಚ್ಚು ಪ್ರಸ್ತುತ ಎಂದು ಹೇಳಿದರು.

೧೫-೧೬ನೇ ಶತಮಾನದಲ್ಲಿ ರಾಕ್ಷಸರ ಹಾವಳಿ ಇದ್ದಾಗ ಅವರನ್ನು ಸಂಹಾರ ಮಾಡಿದವರು ಮಹದೇಶ್ವರರು. ಬುಡಕಟ್ಟು ಜನಾಂಗದ ನೋವು-ನಲಿವುಗಳನ್ನು ಮಹದೇಶ್ವರರಲ್ಲಿ ಕಾಣಬಹುದು ಎಂದರು. ಸಿದ್ಧಗಂಗಾಮಠವು ಆಧುನಿಕ ಅನುಭವ ಮಂಟಪ. ಮಾತೃ ಹೃದಯಿಯಾಗಿದ್ದವರು ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಬಣ್ಣಿಸಿದರು.

ಕೃತಿಗಳ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಸಿ.ಜಿ. ಉಷಾದೇವಿ ಮಾತನಾಡಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಡಾ. ಎಸ್. ಶಿವರಾಜಪ್ಪ ಅವರು ಈ ಎರಡು ಕೃತಿಗಳನ್ನು ರಚಿಸಿದ್ದಾರೆ.

Share This Article
Leave a comment