Karnataka

KSRTC ಯಲ್ಲಿ ಬಸ್ ನಲ್ಲಿ 30 ಕೆಜಿವರೆಗೆ ಲಗೇಜ್ ಉಚಿತ : ನಾಯಿಗೆ ಪುಲ್, ಮರಿಗೆ ಅರ್ಧ ಟಿಕೆಟ್

ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಇ ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಪರಿಷ್ಕೃತ ಆದೇಶದಂತೆ 30 ಕೆಜಿ ವರೆಗೆ ಪ್ರಯಾಣಿಕರ ವೈಯಕ್ತಿಕ ಲಗೇಜ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ.

ನಾಯಿಗೆ ಪುಲ್ ಟಿಕೆಟ್, ನಾಯಿ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವ ವ್ಯವಸ್ಥೆ ಜಾರಿಗೊಳಿಸಿದೆ.ಬೆಂಗಳೂರಲ್ಲಿ ಪ್ಲೈ ಓವರ್​ನಿಂದ ಬಿದ್ದು ಇಬ್ಬರು ಯುವಕರು ಸಾವು : ಮತ್ತೊಬ್ಬನಿಗೆ ಗಾಯ

ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುವ ಜೊತೆಗೆ, ಬಸ್ಸಿನಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಬಳಕೆ ಮಾಡಿಕೊಳ್ಳುವ ಸಂಬಂಧ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಹಿತ, ಪ್ರಯಾಣಿಕ ರಹಿತ ಲಗೇಜ್ ಸಾಗಣೆ ಬಗ್ಗೆ ಅವಕಾಶ ನೀಡಲಾಗಿದೆ.

ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಲಗೇಜ್ ಸಾಗಾಣೆಯ ನಿಯಮಾವಳಿಗಳನ್ನು ಮಾರ್ಪಾಡು ಮಾಡಲು ತೀರ್ಮಾನಿಸಿದ್ದು, ಅದರಂತೆ ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ, ವಿಧಿಸಲಾಗುತ್ತಿದ್ದಂತ ದರದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ನಾಯಿ, ನಾಯಿ ಮರಿಗೆ ಅರ್ಧ ಟಿಕೇಟ್ ದರವನ್ನು ವಿಧಿಸುವಂತೆ ತಿಳಿಸಲಾಗಿದೆ. ಅಲ್ಲದೇ ಸಾಮಾನ್ಯ, ವೇಗದೂತ, ನಗರ, ಹೊರವಲಯ ಬಸ್ಸುಗಳಲ್ಲಿ ಮಾತ್ರ ಸಾಗಣೆ ಮಾಡುವುದನ್ನು ಮುಂದುವರೆಸಲಾಗಿದೆ ಎಂದಿದ್ದಾರೆ.


ಪ್ರತಿ ಪ್ರಯಾಣಿಕರು 30 ಕೆಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯುವ ಅವಕಾಶದಲ್ಲಿ ಪ್ರಯಾಣಿಕ ವೈಯಕ್ತಿಕ ಲಗೇಜ್ ಸೇರಿದಂತೆ ಬ್ಯಾಗ್, ಸೂಟ್ ಕೇಸ್, ಕಿಟ್ ಬ್ಯಾಗ್, ಇತ್ಯಾದಿ ಕೊಂಡೊಯ್ಯುವ ವಸ್ತುಗಳನ್ನು ( ದಿನಸಿ, ತೆಂಗಿನ ಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್ ಫ್ಯಾನ್, ಒಂದು ಮುಕ್ಸರ್ ಗ್ರೈಂಡರ್ ಬಾಕ್ಸ್) ಉಚಿತವಾಗಿ ಪರಿಮಿತಿಯ 30 ಕೆಜಿ ಒಳಗೆ ಪರಿಗಣಿಸುವಂತೆ ತಿಳಿಸಿದ್ದಾರೆ.

30 ಕೆಜಿಗೂ ಅಧಿಕವಿದ್ದಲ್ಲಿ ಉಚಿತ ಸಾಗಣೆಯ 30 ಕೆಜಿ ಹೊರತುಪಡಿಸಿ ಉಳಿದ ಲಗೇಜ್ ಗೆ ನಿಯಮಾವಳಿಯಂತೆ ಲಗೇಜ್ ದರ ವಿಧಿಸುವಂತೆ ತಿಳಿಸಿದ್ದಾರೆ. ಇದನ್ನು ಹೊರತು ಪಡಿಸಿ ಸಾಮಾನ್ಯ ಸ್ಥಾಯಿ ಆದೇಶ, ತಿದ್ದುಪಡಿ ಆದೇಶ, ಇರತೆ ಆದೇಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದ್ದಾರೆ.

Team Newsnap
Leave a Comment

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024