ಮಂಡ್ಯ:
ಐಡಿಯಲ್ ಪಬ್ಲಿಕೇಷನ್ಸ್ ಹೊರತಂದಿರುವ ಕವಯಿತ್ರಿ ಹಾಗೂ ಲೇಖಕಿ ಡಾ.ಶುಭಶ್ರೀಪ್ರಸಾದ್ ರಚನೆಯ ‘ಬ್ಯಾಂಕರ್ಸ್ ಡೈರಿ’ ಮತ್ತು ‘ಓದಿನ ಓದು’ ಕೃತಿಗಳ ಹಾಗೂ ‘ಶ್ರೀರಾಗ’ಆಡಿಯೋ ಆಲ್ಬಂ ಬಿಡುಗಡೆ ಸಮಾರಂಭ ಸೆ.10 ರಂದು ಭಾನುವಾರ ನಡೆಯಲಿದೆ.
ನಗರದ ಗಾಂಧಿಭವನದಲ್ಲಿ ಭಾನುವಾರ ಬೆಳಿಗ್ಗೆ 10. 30 ರಂದು ನಡೆಯುವ ಈ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು.
ಬೆಂಗಳೂರು ಆಕಾಶವಾಣಿ ಕೇಂದ್ರ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೃತಿಗಳನ್ನು ಕುರಿತು ನಿವೃತ್ತ ಆಂಗ್ಲ ಪ್ರಾಧ್ಯಾಪಕಿ ವಿ. ಎಸ್.ಶ್ರೀದೇವಿ ಮಾತನಾಡುವರು.
ಇದೇ ವೇಳೆ ‘ಶ್ರೀರಾಗ’ ಆಡಿಯೋ ಆಲ್ಬಂನ್ನು ಸಂಗೀತ ಸಂಯೋಜಕ ಹಾಗೂ ಕೊಳಲು ವಾದಕ ಉಡುಪಿಯ ಕೆ.ಮುರುಳೀಧರ್, ಮಂಡ್ಯದ ಸುಸ್ವರ ಸಂಗೀತ ಶಾಲೆಯ ನಿರ್ದೇಶಕಿ ರಾಧಿಕಾರಾವ್ ಬಿಡುಗಡೆ ಮಾಡುವರು.
ಐಡಿಯಲ್ ಪಬ್ಲಿಕೇಷನ್ಸ್ ಪ್ರಕಾಶಕ – ಮಾಲೀಕ ಎಂ.ಎಸ್.ಶಿವಪ್ರಕಾಶ್, ಲೇಖಕಿ ಶುಭಶ್ರೀಪ್ರಸಾದ್ ಉಪಸ್ಥಿತರಿರುವರು.
- ರಾಜ್ಯದ 7 ಜಿಲ್ಲೆಗಳಿಗೆ ಅ.21 ರ ವರೆಗೆ ‘ಯಲ್ಲೋ’ ಅಲರ್ಟ್ ಘೋಷಣೆ
- 50:50 ಅನುಪಾತದಲ್ಲಿ ಹಂಚಿಕೆಗೊಂಡ 1,400 ನಿವೇಶನಗಳ ಜಪ್ತಿ ಮಾಡಬೇಕು: ಸಿಎಂಗೆ ಬಿಜೆಪಿ ಶಾಸಕ ಆಗ್ರಹ
- ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ
- ಕಲಬುರಗಿಯಲ್ಲಿ ಭೀಕರ ಅಪಘಾತ – ನಾಲ್ವರು ದುರ್ಮರಣ
- ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
More Stories
ಮಂಡ್ಯದಲ್ಲಿ ಪುನೀತ್ ರಾಜ್ಕುಮಾರ್ ಹೆಸರಲ್ಲಿ ವಂಚನೆ
ರಾತ್ರೋರಾತ್ರಿ ಕೋಟ್ಯಧಿಪತಿಯಾದ ಮಂಡ್ಯದ ಮೆಕ್ಯಾನಿಕ್: ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಗೆಲುವು
ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಮಂಡ್ಯದಲ್ಲಿ ಅ.18, 19 ರಂದು ಉದ್ಯೋಗ ಮೇಳ