ಕಮಲಿ ಧಾರವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ

Team Newsnap
1 Min Read

ಕಮಲಿ ಧಾರವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ದ ವಂಚನೆ ಪ್ರಕರಣ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಕಿರು ಮತ್ತು ಹಿರಿತೆರೆಯ ಫೇಮಸ್ ನಿರ್ದೇಶಕ ಅರವಿಂದ್ ಕೌಶಿಕ್ ಈಗ ಬಂಧನದಲ್ಲಿದ್ದಾರೆ.

ಬೆಂಗಳೂರಿನ ವೈಯಾಳಿ ಕಾವಲ್ ಪೋಲಿಸ್ ಠಾಣೆ ನಿರ್ಮಾಪಕ ರೋಹಿತ್ 2018 ರಲ್ಲಿ 73 ಲಕ್ಷ ರು ಗಳನ್ನು ನಿರ್ದೇಶಕ ಕೌಶಿಕ್ ಗೆ ನೀಡಿದ್ದರಂತೆ.

ಆದರೆ ಧಾರವಾಹಿ ಪ್ರಸಾರವಾಗಿ ಪ್ರಸಿದ್ದಿ ಪಡೆದ ನಂತರೂ ತಮ್ಮ ಹಣವನ್ನು ವಾಪಸ್ಸು ಕೊಟ್ಟಿಲ್ಲ ಹಾಗೂ ಯಾವುದೇ ಲಾಭಂಶವೂ ನೀಡದೇ ವಂಚನೆ ಮಾಡಿದ್ದಾರೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಕಲಂ 420ಅಡಿ ಕೇಸು ದಾಖಲು ಮಾಡಲಾಗಿದೆ,ತನಿಖೆ ಮುಂದುವರೆದಿದೆ.

ಹುಲಿರಾಯ, ನಮ್ಮ ಏರಿಯಾದಲ್ಲಿ ಒಂದು ದಿನ , ಶಾರ್ದೂಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಅರವಿಂದ್ ಕೌಶಿಕ್ ಕಮಲಿ ಧಾರವಾಹಿಯನ್ನೂ ನಿರ್ದೇಶನ ಮಾಡಿದ್ದರು.

Share This Article
Leave a comment