ಮುರುಘಾ ಸ್ವಾಮಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಪೋಕ್ಸೋ ಕೇಸ್ನಲ್ಲಿ ಮೂರನೇ ಆರೋಪಿ ಬಂಧನವಾಗಿದೆ. ಶಿವಮೂರ್ತಿ ಸ್ವಾಮಿ ಉತ್ತರಾಧಿಕಾರಿ ಎಂದು ಬಿಂಬಿತವಾಗಿದ್ದ ಮರಿಸ್ವಾಮಿ ಬಸವಾದಿತ್ಯನು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಗುರವೇ ಪರಬ್ರಹ್ಮ|| ಶಿಕ್ಷಕರ ದಿನಾಚರಣೆ (Teachers Day – 2022
ಪೋಕ್ಸೋ ಕೇಸ್ ದಾಖಲಾಗಿ 11 ದಿನಗಳ ಬಳಿಕ ಬಸವಾದಿತ್ಯನನ್ನೂ ಬಂಧಿಸಲಾಗಿದೆ. ಅಲ್ಲದೆ ಮುರುಘಾ ಸ್ವಾಮಿ ಬಂಧನದ 5 ದಿನಗಳ ಬಳಿಕ ಮರಿಸ್ವಾಮಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಮುರುಘಾ ಸ್ವಾಮಿ ಬಂಧನವಾಗ್ತಿದ್ದಂತೆ ಆರೋಪಿ ಬಸವಾದಿತ್ಯ ಪರಾರಿಯಾಗಿ ಹೊಸಪೇಟೆಯಲ್ಲಿನ ಭಕ್ತರ ಮನೆಯಲ್ಲಿ ಅಡಗಿ ಕುಳಿತಿದ್ದ. ಇದೀಗ ಪೊಲೀಸರು ಬಂಧಿಸಿದ್ದಾರೆ.
ಸ್ವಾಮಿ ಬೇಲ್ ಭವಿಷ್ಯ ಇಂದು ನಿರ್ಧಾರ ?
ಮುರುಘಾ ಸ್ವಾಮಿ 4 ದಿನಗಳ ಪೊಲೀಸ್ ಕಸ್ಟಡಿ ಇಂದು ಬೆಳಗ್ಗೆ 11 ಗಂಟೆಗೆ ಅಂತ್ಯಗೊಳ್ಳಲಿದೆ. ಸರಣಿ ವಿಚಾರಣೆ, ಮೆಡಿಕಲ್ ಚೆಕಪ್, ಸ್ಥಳ ಮಹಜರು ಮುಗಿಸಿರುವ ಪೊಲೀಸರು ಸೋಮವಾರ ಸ್ವಾಮಿಯನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ಈ ಮೊದಲು ಸ್ವಾಮಿಯ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿಕೆ ಮಾಡಿತ್ತು. ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಮಾಡಿತ್ತು. ಇವತ್ತಿಗೆ ಕಸ್ಟಡಿ ಅಂತ್ಯಗೊಂಡಿದ್ದು, ಶ್ರೀಗಳ ಬಂಧನದ ಭವಿಷ್ಯ ಇವತ್ತು ನಿರ್ಧಾರವಾಗಲಿದೆ.