ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ : ಹೂಡಿಕೆಗಾರರಿಗೆ ಕೋಟಿ ಕೋಟಿ ವಂಚನೆ

Team Newsnap
1 Min Read
Bengaluru: 114 crores of Guru Raghavendra Bank. Forfeiture of property ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್‌ನ 114 ಕೋಟಿ ರೂ. ಆಸ್ತಿ ಜಪ್ತಿ

ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ ಯಲ್ಲಿ ಕೋಟಿ ಕೋಟಿ ಹಣವನ್ನು ಹೂಡಿಕೆದಾರರಿಗೆ ಬ್ಯಾಂಕ್ ನಿಂದ ವಂಚನೆ ಮಾಡಿದ್ದಾರೆ

ಬೆಂಗಳೂರಿನ ಸಿರಿವೈಭವ ಪತ್ತಿನ ಸಹಕಾರ ಸಂಘದಿಂದ ಬಹುಕೋಟಿ ವಂಚನೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.ಇದನ್ನು ಓದಿ –KRSನಿಂದ ಭಾರಿ ನೀರು ಬಿಡುಗಡೆ – ಮುತ್ತತ್ತಿ, ಗಾಣಾಳು ಫಾಲ್ಸ್ ಗೆ ಪ್ರವೇಶ ನಿಷೇಧ : ಮಂಡ್ಯ ಡಿಸಿ ಆದೇಶ

ಈ ಬ್ಯಾಂಕ್ ನಗರದಲ್ಲಿ ನಾಲ್ಕು ಶಾಖೆಗಳನ್ನು ಒಳಗೊಂಡಿದೆ 2500 ಹೂಡಿಕೆದಾರರನ್ನು ಹೊಂದಿದೆ ಎನ್ನಲಾಗಿದೆ.

ಉತ್ತರ ಹಳ್ಳಿ, ಆರ್ ಆರ್ ನಗರ, ಬಿಳೇಕಹಳ್ಳಿ ಹಾಗೂ ಬಸವೇಶ್ವರ ನಗರದ ನಾಲ್ಕು ಬ್ರಾಂಚ್ ಗಳಿಂದ ಹೂಡಿಕೆದಾರರಿಗೆ ವಂಚನೆ ಮಾಡಿರೋದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಗ್ರಾಹಕರು ವಂಚನೆ ಸಂಬಂಧ ದೂರು ನೀಡಿದ್ದಾರೆ.

ಪೊಲೀಸರಿಗೆ ಸಿರಿವೈಭವ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ನಾಗವಲ್ಲಿ, ಅಪ್ಪಾಲಾಲ್ ಚಕೋಲಿ, ಹಿರೇಮಠ್ ಹಾಗೂ ನಿರ್ದೇಶಕರ ವಿರುದ್ಧವೂ ದೂರು ನೀಡಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಬ್ಯಾಂಕ್ ವಂಚನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಬ್ಬರನ್ನು ವಶಕ್ಜೆ ಪಡೆಯಲಾಗಿದೆ.

Share This Article
Leave a comment