ಮುಂಬರುವ ವಿಧಾನಸಭಾ ಚುನಾವಣೆಗೆ.ರೇಷ್ಮೆ ನಗರ ರಾಮನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಸ್ಪರ್ಧೆಗಿಳಿಯುತ್ತಾರೆ ಎಂಬ ಕಾರಣಕ್ಕಾಗಿನಿಖಿಲ್ ಫುಲ್ ಆಕ್ಟೀವ್ಆಗಿದ್ದಾರೆ
2023ರ ಚುನಾವಣೆ ಹತ್ತಿರವಾಗ್ತಿದ್ದಂತೆ, ರಾಜಕೀಯ ನಾಯಕರ ತಂತ್ರ-ರಣತಂತ್ರಗಳು ಹೆಚ್ಚಾಗ್ತಿವೆ.
ಅದರಲ್ಲೂ ಟಿಕೆಟ್ ಹಂಚಿಕೆ, ಕ್ಷೇತ್ರ ಆಯ್ಕೆಯಲ್ಲಿ ಮೂರು ಪಕ್ಷಗಳು ಸಾಕಷ್ಟು ಲೆಕ್ಕಾಚಾರ ಹಾಕ್ತಿವೆ. ಯಾರು, ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ
ಅನ್ನೋದು ಕುತೂಹಲ ಕೆರಳಿಸಿದೆ.
ರಾಮನಗರ ಹೇಳಿ ಕೇಳಿ ದಳಪತಿಗಳ ಭದ್ರ ಕೋಟೆ. ಅದರಲ್ಲೂ 2023ರ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಳ ಯುವ ಪಡೆ ಫುಲ್ ಆ್ಯಕ್ಟಿವ್ ಆಗಿದೆ.
ಪಕ್ಷ ಕಟ್ಟುವಲ್ಲಿ ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಇದೇ ಕೆಲಸದಲ್ಲಿ ನಿರತರಾಗಿದ್ದಾರೆ.
2023ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುತ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ.