ಫಾಜಿಲ್ ಕೊಲೆ ಆಗುವ ತನಕ ಅಜಿತ್ ಕಾರಿನಲ್ಲೇ ಕಾಯುತ್ತಿದ್ದ ನಂತರ ಕೃತ್ಯ ಮಗಿದ ಬಳಿಕ ಹಂತಕರು ಎಸ್ಕೇಪ್ ಆಗಲು ಅಜಿತ್ ಸಹಕರಿಸಿದ್ದಾನೆಂದು ತನಿಖೆಯಿಂದ ಗೊತ್ತಾಗಿದೆ.ಇದನ್ನು ಓದಿ –ಮಂಡ್ಯದಲ್ಲಿ ಮಳೆ – ವರುಣನ ಆರ್ಭಟಕ್ಕೆ ಬೆಂಗಳೂರು ಜನ ತತ್ತರ : ರಸ್ತೆಗಳು ಜಲವೃತ
ಫಾಸಿಲ್ ಹಂತಕರ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸುಳಿವು ನೀಡಿತ್ತು. ಇದರ ಅನ್ವಯ 30ಕ್ಕೂ ಹೆಚ್ಚು ಸಿಸಿಟಿವಿ ಮಾಹಿತಿಯನ್ನು ಕಲೆ ಹಾಕಿರುವ ಮಂಗಳೂರು ಸಿಸಿಬಿ ಪೊಲೀಸರು ಹಂತಕರ ಕಾರಿನ ದೃಶ್ಯಗಳನ್ನು ಸಂಗ್ರಹಿಸಿದ್ದರು.
ಟೋಲ್ಗೇಟ್ನ ಸಿಸಿಟಿವಿಯಲ್ಲಿ ಹಂತಕರ ಕಾರು ಪಾಸ್ ಆಗಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಹಂತಕರು ಬಿಳಿ ಬಣ್ಣದ KA19 ಸಿರೀಸ್ನ ಹ್ಯುಂಡೈ ಇಯಾನ್ ಕಾರ್ ಬಳಸಿದ್ದನ್ನು ಖಚಿತ ಪಡಿಸಿಕೊಂಡಿದ್ದರು. ಕೂಡಲೇ ಮಾಹಿತಿ ಪತ್ತೆ ಮಾಡಲು RTO ಬಳಿ ತೆರಳಿದ್ದ ಟೀಂ, ಮಂಗಳೂರಿನಲ್ಲಿ 200 ಕ್ಕೂ ಹೆಚ್ಚು ಇಯಾನ್ ಕಾರುಗಳ ಲಿಸ್ಟ್ ಪಡೆದುಕೊಂಡು, ಅದರಲ್ಲಿ ಬಿಳಿ ಬಣ್ಣದ ಇಯಾನ್ ಕಾರು ಅದರಲ್ಲೂ KA19 ಸಿರೀಸ್ ಪತ್ತೆ ಮಾಡಿದ್ದರು. ಈ ಮಾಹಿತಿ ಆಧರಿಸಿ 17 ಶಂಕಿತರನ್ನು ಕರೆತಂದು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಡ್ರೈವರ್ ಬಗ್ಗೆ ಮಾಹಿತಿ ಕಲೆ ಹಾಕುವಾಗ ಈತನೇ ಮಾಲೀಕ ಎಂಬುದು ಪತ್ತೆಯಾಗಿತ್ತು. ಆದರೆ ಘಟನೆ ಬಳಿಕ ಆತ ತಲೆ ಮರೆಸಿಕೊಂಡಿರೋದು ಖಚಿತವಾಗಿತ್ತು. ಕೂಡಲೇ ಆತನ ಪತ್ತೆಗೆ ಮುಂದಾಗಿದ್ದ ಮಂಗಳೂರು ಪೊಲೀಸರು, ನಿನ್ನೆ ತಡ ರಾತ್ರಿ 7 ಗಂಟೆಗೆ ಆರೋಪಿಯನ್ನು ಬಂಧಿಸಿದ್ದಾರೆ.
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More
ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
This website uses cookies.
Leave a Comment